Saturday, February 21, 2009

ಕಥೆ : ಸಹನಾಮಯಿ....... ಭಾಗ 1

ಈ ಕಥೆಯಲ್ಲಿ ಬರುವ ವ್ಯಕ್ತಿ, ವಿಷಯಗಳು ಕೇವಲ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕಾಕತಾಳೀಯ ಮಾತ್ರ.

ಸುಶೀಲಮ್ಮ , ಶ್ರೀಕಂಠಯ್ಯ ದಂಪತಿಗಳು ಬೆಂಗಳೂರಿನ ಒಂದು ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರಿಬ್ಬರದು ತುಂಬಾ ಸರಳವಾದ ಜೀವನ, ಅನಾವಶ್ಯಕವಾಗಿ ಯಾರ ತಂಟೆಗೂ ಹೋಗುತ್ತಿರಲಿಲ್ಲ. ಈ ದಂಪತಿಗೆ ಮಕ್ಕಳಿರಲಿಲ್ಲ! ಸುಶೀಲಮ್ಮನವರ ಮಡಿಲು ತುಂಬಲು ಏನೆಲ್ಲ ಪೂಜೆ, ಪ್ರಯತ್ನ ಪಟ್ಟರು ಯಾಕೋ ಯಾವುದು ಕೈಗೂಡಲಿಲ್ಲ, ಆ ದೇವರು ಯಾಕೋ ಇವರ ಮೇಲೆ ಕರುಣೆ ತೋರಲಿಲ್ಲಾ. ಈ ಬಗ್ಗೆ ಪತಿರಾಯರು ಎಷ್ಟೆಲ್ಲಾ ಸಮಾಧಾನ ಮಾಡಿದರು, ಸಂತೈಸಿದರೂ ಆಕೆಗೆ ಯಾವುದೊ ಒಂದು ಮೂಲೆಯಲ್ಲಿ ಕೊರಗಂತು ಇದ್ದೆ ಇತ್ತು . ಇದೆ ವಿಷಯ ಯಾವಾಗಾದರೊಮ್ಮೆ ಯೋಚಿಸುವಾಗ ಪತಿರಾಯರು ಹೇಳುತ್ತಿದ್ದ ಸಾಂತ್ವನದ ಮಾತುಗಳನ್ನು ನೆನೆಪಿಸಿಕೊಂಡು ಸ್ವಲ್ಪ ಹೊತ್ತಿನ ನಂತರ ಅವರೇ ಸಮಾಧಾನವಾಗುತ್ತಿದ್ದರು. ಹೀಗೆ ಜೀವನ ಸಾಗುತ್ತಿತ್ತು.

ಆ ದಿನ ಮಧ್ಯಾನ್ಹದ ಊಟ ಮತ್ತು ಎಲ್ಲ ಕೆಲಸ ಮುಗಿಸಿ ವಿಶ್ರಮಿಸಿಕೊಳ್ಳಲು ಹಾಲ್ ನಲ್ಲಿ ಸೋಫಾದಲ್ಲಿ ಬಂದು ಕುಳಿತರು. ಮಧ್ಯಾನ್ನ ನಿದ್ರಿಸುವ ಅಭ್ಯಾಸ ಇಲ್ಲವಾದುದರಿಂದ, ಸ್ವಲ್ಪ ಹೊತ್ತು ಟಿವಿ ನೋಡೋಣ ಎಂದು ಟಿವಿ ಹಾಕಿ ಹಾಗೆ ಸುಮ್ಮನೆ ಅಲ್ಲೇ ಮಲಗಿದರು. ಪತಿ ಕೆಲಸಕ್ಕೆ ಹೋಗಿದ್ದುದರಿಂದ, ಮನೆಯಲ್ಲಿ ಒಬ್ಬರಿಗೆ ಬೇಸರವೆನಿಸಿ, ಟಿವಿ ಕೂಡ ನೋಡಲು ಇಷ್ಟವಾಗದೆ, ಟಿವಿ ಆರಿಸಿ ರೇಡಿಯೋ ಆನ್ ಮಾಡಿದರು. ಹಳೆಯ ಚಿತ್ರಗಳ ಮಧುರ ಗೀತೆಗಳು ಪ್ರಸಾರವಾಗುತ್ತಿತ್ತು. ಹಳೆಯ ಹಾಡುಗಳನ್ನು ಕೇಳುತ್ತಾ, ಕೇಳುತ್ತಾ ಸ್ವಲ್ಪ ಅವರ ಬೇಸರ ದೂರವಾದಂತೆ ಅನಿಸಿತು. ಮನಸ್ಸು ಹಗುರವಾಯಿತು. ಅದರಲ್ಲಿ ಅವರಿಗೆ ತುಂಬಾ ಇಷ್ಟವಾದ ಹಾಡು ಬರುತ್ತಿರುವಾಗ, ಅದರೊಂದಿಗೆ ಅವರು ಹಾಡನ್ನು ಗುನುಗುನಿಸುತ್ತಾ ಎದ್ದು ಕುಳಿತರು.

ಒಲವೆ ಜೀವನ ಸಾಕ್ಷಾತ್ಕಾರ ..... ಒಲವೆ ಮರೆಯದ ಮಮಕಾರ...... ಈ ಹಾಡನ್ನು ಕೇಳುತ್ತಾ, ಹಾಡು ಮುಗಿಯುವ ವೇಳೆಗೆ ಹಾಗೆ ಯೋಚನೆಗೆ ಇಳಿದರು. ಆ ಚಿತ್ರದ ಕಥೆ ನೆನೆದುಕೊಳುತ್ತಾ, ಹೌದು ಆಗಿನ ಕಾಲದ ಕಥೆ, ದೊಡ್ಡವರು ಈ ಜೋಡಿಗೆ (ರಾಜಕುಮಾರ್, ಜಮುನ) ಎಷ್ಟೇ ಅನ್ಯಾಯ ಮಾಡಿದರೂ ಹೇಗೆ ಅವರು ಸಂಯಮ ಕಳೆದುಕೊಳ್ಳದೆ ಹಿರಿಯರಿಗೆ ಗೌರವ ಕೊಟ್ಟು ಮದುವೆಯಾಗದೆ ಅಮರ ಪ್ರೇಮಿಗಳಾಗಿ ಉಳಿದರು. ಅಷ್ಟು ಸಹನೆ ಮತ್ತು ಸಂಯಮ ಅವರಲ್ಲಿತ್ತು. ಆದರೆ ಈಗಿನ ಕಾಲದವರಿಗೆ.........

ಹಾಗೆ ಯೋಚಿಸುತ್ತಾ ಹಿಂದಿನ ದಿನಗಳ ನೆನಪಿಗೆ ಜಾರಿದರು. ಹೌದು ಅದು ಸ್ವಪ್ನ ಮತ್ತು ಸಾಗರ್ ವಿಷಯ.
ಸ್ವಪ್ನ ಇವರ ಮನೆಯ ಮೇಲಿನ ನಿವೇಶನದಲ್ಲಿ ಬಾಡಿಗೆಗಿದ್ದ ಹುಡುಗಿ. ತಂದೆ, ತಾಯಿಯ ಉಪೇಕ್ಷೆ, ಉದಾಸಿನಕ್ಕೆ ಬಲಿಯಾಗಿ, ರೋಸಿಹೋಗಿ ಕೆಲಸದ ನೆಪದಿಂದ ಅವರಿಂದ ದೂರವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದಳು.
ಅನುಕೂಲವಾದ ಕೆಲಸ, ಒಳ್ಳೆಯ ಸಂಬಳ, ಮನೆಯಲ್ಲಿ ಒಬ್ಬಳೇ ಇದ್ದರು ತನಗೆ ಬೇಕಾದ, ಅವಶ್ಯಕತೆ ಇರುವ ಎಲ್ಲಾ ವಸ್ತುಗಳನ್ನು ಕೊಂಡುಕೊಂಡಿದ್ದಳು. ಮನೆಯ ಬಾಡಿಗೆ ಮತ್ತು ಇತರ ಕೆಲವು ವಸ್ತುಗಳು ತಾನು ಕೆಲಸ ಮಾಡುವ ಕಂಪನಿ ಯಿಂದ ದೊರಕುತ್ತಿದ್ದರಿಂದ ರೂಮಿನ ಬದಲು ಮನೆಯನ್ನೇ ಬಾಡಿಗೆಗೆ ಪಡೆದಿದ್ದಳು.

ಮುದ್ದಾದ, ಚೆಲುವಿನ ಹುಡುಗಿ ಸ್ವಪ್ನ. ಆದರು ಅವಳಿಗೆ ಸ್ವಲ್ಪವು ಗರ್ವವಿರಲಿಲ್ಲ. ಒಮ್ಮೆ ಅವಳನ್ನು ನೋಡಿದವರು ಮತ್ತೆ ಮತ್ತೆ ನೋಡ ಬೇಕೆನಿಸುವಂತ ಅಂದ. ಮತ್ತು ಇವಳು ಸ್ನೇಹಜೀವಿಯಾಗಿದ್ದಳು ಕೂಡ ಆದರೆ ತಂದೆ ತಾಯಿಯ ವಿಷಯ ಬಂತೆಂದರೆ ಸಾಕು ಹಾಗೆ ಉರಿದು ಬೀಳುತ್ತಿದ್ದಳು. ಇಷ್ಟು ಒಳ್ಳೆಯ ಹುಡುಗಿಯನ್ನು ಅವಳ ಪೋಷಕರು ಉಪೆಕ್ಷಿಸುತಿದ್ದದ್ದಾದರು ಯಾಕೆ ಎಂದು ಇವಳ ಬಗ್ಗೆ ಗೊತ್ತಿದ್ದವರು ಯೋಚಿಸದೆ ಇರುತ್ತಿರಲಿಲ್ಲ. ಇಷ್ಟಕ್ಕೂ ಅವರು ಇವಳ ಮಲ ತಂದೆ, ತಾಯಿಯೇನಲ್ಲ.

ಸುಶೀಲಮ್ಮ ನವರನ್ನು ಕಂಡರೆ ಇವಳಿಗೆ ತುಂಬಾ ಅಕ್ಕರೆ, ಪ್ರೀತಿ. ಅವರಿಗೂ ಅಷ್ಟೆ, ಇವಳ ಮೇಲೆ ತುಂಬ ಪ್ರೀತಿ ಮತ್ತು ಮಮಕಾರ.
ಶ್ರೀಕಂಠಯ್ಯನವರಿಗೂ ಇವಳನ್ನು ಕಂಡರೆ ಏನೋ ಅಕ್ಕರೆ. ಈ ದಂಪತಿಗಳು ತೋರಿಸುವ ಪ್ರೀತಿ , ಮಮತೆಗೆ ಅವಳ ಮನಸ್ಸು ಇವರಾದರು ನನಗೆ ತಂದೆ, ತಾಯಿಯಾಗಿದ್ದರೆ ಎಷು ಚೆನ್ನಾಗಿರುತ್ತಿತ್ತು ಎಂದು ಯೋಚಿಸದೆ ಇರಲಿಲ್ಲ.
ಇಷ್ಟೆಲ್ಲಾ ಒಳ್ಳೆ ಗುಣಗಳಿರುವ ಹುಡುಗಿಗೆ ಅಭಿಮಾನಿಗಳು, ಪ್ರೇಮಿ ಇರಲೇಬೇಕು ಅಲ್ಲವೇ? ಹೌದು ಅವನೇ ಸಾಗರ್.





ಮುಂದುವರೆಯುವುದು.........

3 comments:

Prabhuraj Moogi said...

ಚೆನ್ನಾಗಿ ಬರೆಯುತ್ತೀರಿ ಹಾಗೆ ಕುತೂಹಲ ಹುಟ್ಟಿಸಿ, ಕಾಯುವಂತೆ ಮಾಡಿದ್ದೀರಿ, ಮುಂದಿನ ಭಾಗಕ್ಕೆ ಕಾಯುತ್ತಿದ್ದೇವೆ...

SSK said...

Dhanyavaadagalu, Prabhu avare! Nimma helike/comment odi nanage tumbaa santosha ayitu. Idakke kaarana nimmellara sahakaara, Aashirvaada/Abhimaana!!

Nisha said...

Hi
Sahanamayiya mundina bhagakke kaytha namma sahane kaledogthide. E katheya mundina bhaga yavaga baruthe? kuthoohaladinda navella kayuthiddeve.