Saturday, November 13, 2010

ಭಾವನೆಗಳ ಪುಳಕ.....!



ಬಾಳೊಂದು ಭಾವಗೀತೆ
ನೀನದರ ಪ್ರೇಮಗೀತೆ!

ಬಾಳೊಂದು ಪುಷ್ಪವನ
ನೀನದರೊಳಗೆ ನಲಿವ ಸುಮ!

ಬಾಳೊಂದು ಜ್ಞಾನ ಮಂದಿರ
ನಿನ್ನಿಂದಲೇ ಈ ಬಾಳು ಸುಂದರ!

ಬಾಳೊಂದು ಹರಿವ ನದಿ
ನಿನ್ನಲ್ಲೇ ಬೆರೆವುದು ನನ್ನೀ ಹಾದಿ!

ಬಾಳೊಂದು ಭಕ್ತಿ ದೇಗುಲ
ನೀನಿರಲು ಮನವಾಗುವುದು ಕೋಮಲ!

ಬಾಳೊಂದು ಸಪ್ತ ಸಾಗರ
ನೀನೆನಗೆ ನೀಡಿದಾ ಪ್ರೀತಿ ಅಪಾರ!

ಒಲವು, ಚೆಲುವು, ಬಲವು, ಗೆಲುವು, ಛಲವು ಎಲ್ಲ ನಿನ್ನಿಂದ, ಸಂಗಾತಿ ನಿನ್ನ ಜೊತೆಜೊತೆಯಲಿ ನಾ ನಡೆಯುತಿರಲು ಈ ಬಾಳಿನಲ್ಲಿ ನೀ ತುಂಬಿದೆ ನಿರಂತರ ಆನಂದ!!

Sunday, August 22, 2010

ಸಂಭ್ರಮದ ಸುದಿನಾ......!!..!!

ನೀನು ಬಂದ ಮೇಲೆ ತಾನೇ ಇಷ್ಟು ಚೆನ್ನ ಈ ಬಾಳು,

ನೀನು ತಾನೇ ಹೇಳಿಕೊಟ್ಟೆ ಪ್ರೀತಿಸಲು !

ಕಂಗಳು ಹಿಂದೆಂದೂ ಕಾಣದ ಹೊಸದೊಂದು

ಲೋಕಕೆ ನನ್ನನ್ನು ನೀ ಸೆಳೆದೆ !!

ಲಾ ಲ ಲ ಲಾ ಲಾ ಲ........ಲಾ ಲಾ ಲ ಲಾ ಲಾ ಲ ......ಲಾ ಲಾ ಲಾ !





ಸ್ನೇಹಿತರೆ, ಇದೇನಿದು ಲೇಖನದ ತಲೆ ಬರಹ ಏನೋ ಇದೆ, ಹಾಡೆಲ್ಲ ಇದೆ ಇದೇನಿದೂ ಅಂದುಕೊಂಡಿರಾ?

ಗಾಬರಿಯಾಗಬೇಡಿ, ಈ ಹಾಡು ಸಿನೆಮಾದಲ್ಲಿ ಪ್ರಿಯಕರ ಪ್ರೇಯಸಿಗೆ ಹಾಡಿದ್ದ ಹಾಡು ಇದು ಆಲ್ವಾ?

ಆದರೆ ಈ ಹಾಡನ್ನು ನಾನು ಬ್ಲಾಗ್ ಲೋಕಕ್ಕೆ ಅಂತ ಉಪಯೋಗಿಸಿದ್ದು! ಈ ಹಾಡು ಬ್ಲಾಗ್ ಲೋಕಕ್ಕೂ ಅನ್ವಯಿಸುತ್ತದೆ ಅಲ್ಲವೇ?! ಇರಲಿ ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ, ಅದೇನೆಂದರೆ ಆಗಸ್ಟ್ ೨೨ ಬ್ಲಾಗ್ ಲೋಕದ ಜನರಿಗೆ ಸುದಿನ, ಕಾರಣ ಆ ದಿನದ ಬ್ಲಾಗಿಗರ ಕೂಟ! ಅದಕ್ಕೂ ಮೊದಲು ಶಿವೂ ಮತ್ತು ಅಜಾದ್ ಅವರ ಪುಸ್ತಕ ಬಿಡುಗಡೆ ಸಮಾರಂಭ! ಇದು ಸುಮಾರು ಜನರಿಗೆ (ಬ್ಲಾಗಿಗರಿಗೆ) ಗೊತ್ತಿರುವ ವಿಷಯವೇ ಸರಿ!


ಆ ದಿನ ಅಂದರೆ ಆಗಸ್ಟ್ ೨೨, ೨೦೧೦ ಬೆಳಗ್ಗೆ ಸುಮಾರು ೧೧ ಗಂಟೆಗೆ ಸಮಾರಂಭ ಕಾರ್ಯಕ್ರಮ ಶುರುವಾಯಿತು.



ಮೊದಲಿಗೆ ಪ್ರವೀಣ್ (ಮನದಾಳದ ಮಾತು) ಅವರಿಂದ ಕಾರ್ಯಕ್ರಮದ ವಿವರಣೆ, ನಂತರ ಪ್ರಾರ್ಥನೆ ಮತ್ತು ಅಥಿತಿಗಳೊಂದಿಗೆ ದೀಪ ಬೆಳಗುವ ಕಾರ್ಯಕ್ರಮ ಆನಂತರ ಶಿವೂ ಅವರ "ಗುಬ್ಬಿ ಎಂಜಲು" ಮತ್ತು ಅಜಾದ್ ಅವರ "ಜಲನಯನ" ಪುಸ್ತಕಗಳ ಲೋಕಾರ್ಪಣೆ ಹೀಗೆ ಪ್ರಾರಂಭವಾಯಿತು!
ಜೊತೆಗೆ ಭಾಷಣ ಶುರುವಾಯಿತು. ಮೊದಲು ಮಾತನಾಡಿದವರು ಶಿವೂ, ನನಗೆ ವೇದಿಕೆಯ ಮೇಲೆ ನಿಂತು ಮಾತನಾಡಲು ಬರುವುದಿಲ್ಲ, ನನ್ನ ಮೊದಲ ಪುಸ್ತಕ 'ವೆಂಡರ್ ಕಣ್ಣು' ಪುಸ್ತಕದ ಬಿಡುಗಡೆಯ ಸಮಾರಂಭದಲ್ಲಿ ನಾನು ಭಾಷಣ ಮಾಡುವುದರಿಂದ ತಪ್ಪಿಸಿಕೊಂಡಿದ್ದೆ, ಆದರೆ ಈಗ ಸಿಕ್ಕಿಹಾಕಿಕೊಂಡಿದ್ದೇನೆ, ನನ್ನ ಮಾತನ್ನು ನನ್ನ ಲೇಖನ ಮತ್ತು ಛಾಯ ಚಿತ್ರಗಳಂತೆ ಸಹಿಸಿಕೊಳ್ಳಿ, ನಾನು ಹೀಗೆ ಮಾತನಾಡುತ್ತಿರುವುದು ಮೊದಲನೇ ಸಲ ಆದ್ದರಿಂದ ನನ್ನನ್ನು ಸಹಿಸಿಕೊಳ್ಳಿ ಎಂದು ಹೀಗೆ ಏನೇನೋ ಹೇಳುತ್ತಲೇ ಅಧ್ಬುತವಾಗಿ ಭಾಷಣ ಮಾಡಿ, ತಮ್ಮ ಮಾತಿನಿಂದ ಎಲ್ಲರನ್ನು ಕಟ್ಟಿಹಾಕಿದರು!


ನಂತರ ಮಾತನಾಡಿದವರು ಡುಂಡಿರಾಜ್ ಅವರು, ಎಂದಿನಂತೆ ತಮ್ಮ ಹಾಸ್ಯ ಶೈಲಿಯಲ್ಲೇ (ನಾನು ನೇರವಾಗಿ ಅವರನ್ನು ನೋಡಿ ಭಾಷಣ ಕೇಳಿದ್ದು ಇದೆ ಮೊದಲು. ಆದರೆ ಟೀವಿಯಲ್ಲಿ ನೋಡಿ ಮತ್ತು ಅವರಿವರ ಬಾಯಿಂದ ಕೇಳಿ ತಿಳಿದಿದ್ದರಿಂದ ಎಂದಿನಂತೆ ಎನ್ನುವ ಪದ ಉಪಯೋಗಿಸಿದೆ) ಸೊಗಸಾಗಿ ಭಾಷಣ ಮಾಡಿ ಎಲ್ಲರನ್ನು ನಗಿಸಿದರು! ನಂತರ ಶ್ರೀ ಹಾಲ್ದೊಡ್ಡೇರಿ ಸುಧೀಂಧ್ರ ಅವರು ಮಾತನಾಡಿದರು!
ಆ ನಂತರದಲ್ಲಿ ಡಾ. ಶೇಷಾ ಶಾಸ್ತ್ರಿ ಅವರ ಭಾಷಣವಿತ್ತು!! ಕೊನೆಯಲ್ಲಿ ಮಾತನಾಡಿದವರೇ ಅಜಾದ್! ಇವರ ಭಾಷಣ ಬಹಳ ಕೆಟ್ಟದಾಗಿತ್ತು (ಅಯ್ಯಯ್ಯೋ ತಪ್ಪು, ತಪ್ಪು ಕ್ಷಮಿಸಿ. ರಾಮ ರಾಮ, ಇದೇನಾಗಿಹೋಯಿತು! ವ್ಯಾಕರಣ ತಪ್ಪಿಹೋಯಿತು.)(ಅಜಾದ್ ಸಾರ್, ಕ್ಷಮಿಸಿ ತಪ್ಪು ತಿಳಿದು ಕೊಳ್ಳಬೇಡಿ ಸುಮ್ಮನೆ ತಮಾಷೆಗಾಗಿ ಈ ತುಂಟಾಟ ಅಷ್ಟೇ., ಅನ್ಯತಾ ಭಾವಿಸಬೇಡಿ ಪ್ಲೀಸ್!) ಅಲ್ಲಲ್ಲ ಕಟ್ ಕಟ್ ಆಗುತಿತ್ತು ಪಾಪ ಅವರಿಗೆ ಒಂದೇ ಸಮನೆ ಮಾತನಾಡಲು ಅವಕಾಶ ಸಿಗಲಿಲ್ಲ, ಆದರೂ ಅವರ ಹಸನ್ಮುಖದ, ಏಕತಾನತೆಯ ಮಾತುಗಳು ಮತ್ತು ಭಾಷಣ ಶೈಲಿ ಸುಂದರವಾಗಿತ್ತು !!!
ಈ ಕಾರ್ಯಕ್ರಮಗಳ ಚಂದದ ನಿರೂಪಣೆ ಮತ್ತು ನಿರ್ವಹಣೆ ಶ್ರೀಮತಿ ಸುಗುಣ ಮಹೇಶ್ (ಮೃದುಮನಸು) ಅವರದು.




ಪುಸ್ತಕಗಳ ಬಗೆಗಿನ ಮಾತುಕತೆ, ವಿಚಾರ ವಿಮರ್ಶೆ ಭಾಷಣ ಇವುಗಳ ನಂತರ ಅಥಿತಿಗಳಿಗೆ ಸನ್ಮಾನ ಸಮಾರಂಭ ಕೈಗೊಳ್ಳಲಾಗಿತ್ತು!!


ಒಟ್ಟಾರೆ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು !! ಈ ಸಮಾರಂಭ ಮುಗಿದು, ಸ್ವಲ್ಪ ಹೊತ್ತಿನ ವಿರಾಮದ ನಂತರ ಬ್ಲಾಗಿಗರ ಕೂಟ ಶುರುವಾಯಿತು.
ಈ ವಿರಾಮದ ಸಮಯದಲ್ಲೇ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡರು.

ಬ್ಲಾಗಿಗರ ಕೂಟ ಶುರುವಾಯಿತು. ಮೊದಲಿಗೆ ಹಾಡು, ಮಾತು ನಿರೂಪಣೆ ಹೀಗೆ ಸಾಗುತ್ತಾ, ಹರಟೆ, ಚೇಷ್ಟೆ, ಉಡುಗೊರೆ ಹಂಚುವ ಕಾರ್ಯಕ್ರಮ ಹೀಗೆ ಮುಂದುವರೆಯಿತು.
ಪ್ರಾರಂಭದಲ್ಲಿ ಹಲವರಿಗೆ ಒಬ್ಬರಿಗೊಬ್ಬರ ಪರಿಚಯವಿಲ್ಲದೆ ಮಿಕ - ಬಕ ಗಳಂತೆ ಒಬ್ಬರನ್ನೊಬ್ಬರು ಸುಮ್ಮನೆ ನೋಡುತ್ತಿದ್ದರು / ನೋಡಿಕೊಳ್ಳುತ್ತಿದ್ದರು! :) :)
ಅದೇ ಕೊನೆಯಲ್ಲಿ ಒಬ್ಬರಲ್ಲೊಬ್ಬರು ಎಷ್ಟು ಬೆರೆತು ಹೋದರೆಂದರೆ, ಎಲ್ಲರೂ ಎಷ್ಟೋ ವರ್ಷಗಳಿಂದ ಪರಿಚಯದಿಂದ ಪಳಗಿದಂತಹ ವಾತಾವರಣ ಸೃಷ್ಟಿಯಾಗಿತ್ತು !!!
ಅಲ್ಲಿ ಅನುಭವಿಸಿದ ರಸಕ್ಷಣಗಳನ್ನು ಎಲ್ಲವೂ ಮಾತಿನಲ್ಲಿ ವಿವರಿಸಲಾಗುವುದಿಲ್ಲ. ಅಲ್ಲಿದ್ದು ಅದನ್ನೆಲ್ಲ ಅನುಭವಿಸಿದವರಿಗೆ ಗೊತ್ತು ಅದರ ಸ್ವಾದ !!
ಫೋಟೋಗಳಲ್ಲಿ ತೋರಿಸೋಣವೆಂದರೆ ನಾನು ಯಾವ ಫೋಟೋನೂ ಅಲ್ಲಿ ತೆಗೆಯಲಿಲ್ಲ ಯಾಕೆಂದರೆ ನಮ್ಮ ಶಿವೂ (ಛಾಯ ಕನ್ನಡಿ) ಅವರು ಇರುವಾಗ ನಮಗೇಕೆ ಆ ಚಿಂತೆ ಅಲ್ಲವೇ ?!
ನೀವು ಫೋಟೋಗಳನ್ನು ಶಿವೂ (ಛಾಯ ಕನ್ನಡಿ) ಮತ್ತು ಪ್ರಕಾಶ್ ಹೆಗ್ಡೆ (ಇಟ್ಟಿಗೆ ಸಿಮೆಂಟು ) ಇವರ ಬ್ಲಾಗ್ನಲ್ಲಿ ನೋಡಬಹುದು (ಕೆಲವರು ಆಗಲೇ ನೋಡಿರಲೂ ಬಹುದು ಅಲ್ಲವೇ)

ಮತ್ತೊಮ್ಮೆ ಬ್ಲಾಗಿಗರ ಕೂಟದಲ್ಲಿ ಇನ್ನೂ ಹೆಚ್ಚೆಚ್ಚು ಜನ ಸೇರೋಣ ಎಂದು ಆಶಿಸುತ್ತಾ ........!

Sunday, August 1, 2010

ಸಣ್ಣ ಕಥೆ.....?!

ಈ ಕಥೆ ಕೇವಲ ಕಾಲ್ಪನಿಕ, ಯಾವುದೇ ವ್ಯಕ್ತಿ ಅಥವಾ ವಿಚಾರಗಳ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ !

ಮುಚ್ಚಿದ್ದ ದೇವಸ್ಥಾನದ ಹೊರಗಿನ ಜಗುಲಿಯ ಮೇಲೆ ಒಬ್ಬಂಟಿಯಾಗಿ ಕುಳಿತಿದ್ದ ರಾಮಯ್ಯನವರು, ಅಷ್ಟೇನೂ ಬಿಸಿಲಿಲ್ಲದ ಮಧ್ಯನ್ಹದಲ್ಲಿ, ರಸ್ತೆಯಲ್ಲಿ ಓಡಾಡುತ್ತಿದ್ದ ಜನರನ್ನು ನೋಡುತ್ತಾ ಹಾಗೆಯೇ ಅನ್ಯ ಮನಸ್ಕರಾಗಿ ಯಾವುದೋ ಯೋಚನೆಯಲ್ಲಿ ಮುಳುಗಿದ್ದರು.
ಅವರನ್ನು ಗಮನಿಸಿ ನೋಡುವ ಯಾರಿಗಾದರೂ ತಿಳಿಯುತ್ತಿತ್ತು ಅವರು ಜೀವನದಲ್ಲಿ ದುಡಿದೂ ದುಡಿದೂ ಬಳಲಿರುವ ಕಷ್ಟ ಜೀವಿ ಎಂದು!

ಆಗಿನ ಕಾಲದ ನಿಯಮವೆಂಬಂತೆ, ತಕ್ಕಮಟ್ಟಿಗೆ ಓದು ಮುಗಿಸಿ, ಕೆಲಸಕ್ಕೆ ಸೇರಿ,
ಹಿರಿಯರು ಒಪ್ಪಿ ಮಾಡಿದ ಸಂಪ್ರದಾಯ ಮದುವೆಯಿಂದ, ಮಡದಿಯ ಜೊತೆ, ಬರುವಷ್ಟು ಸಂಬಳದಲ್ಲೇ ತೃಪ್ತ ಜೀವನ ಸಾಗಿಸುತ್ತಿದ್ದರು ರಾಮಯ್ಯ! ರಾಮಯ್ಯನವರ ಹೆಂಡತಿ ಜಾನಕಮ್ಮನವರು. ಅನ್ಯೋನ್ಯ ದಾಂಪತ್ಯ ಇವರದು.
ಹಿರಿಯರೆಂದರೆ ಗೌರವ, ಭಯ ಭಕ್ತಿ, ಪೂಜ್ಯನೀಯ ಭಾವನೆ ಮತ್ತು ಸೇವಾ ಮನೋಭಾವ ಇಬ್ಬರಲ್ಲೂ ಸಮಾನವಾಗಿತ್ತು. ಆದ್ದರಿಂದ ಇವರೂ ಆದರ್ಶ ದಂಪತಿಗಳಾಗಿಯೂ ಹೆಸರಾಗಿದ್ದರು! ಜೀವನದ ಬಂಡಿ ಸಾಗುತ್ತಿತ್ತು.

ಮನೆಯವರ ಅವಶ್ಯಕತೆ, ಮಕ್ಕಳ ವಿಧ್ಯಾಭಾಸ ಎಲ್ಲವನ್ನೂ ತಮಗೆ ಬರುತ್ತಿದ್ದ ನಾಲ್ಕಂಕೆ ಸಂಬಳದಲ್ಲೇ ಸರಿದೂಗಿಸುತ್ತಿದ್ದರು.
ಮಕ್ಕಳು ಬೆಳೆದು ದೊಡ್ದವರಾಗುವಷ್ಟರಲ್ಲಿ ತಮ್ಮ ಕಷ್ಟಾರ್ಜಿಥದಿಂದ ಒಂದು ಸ್ವಂತ ಮನೆಯನ್ನು ಮಾಡಿಕೊಂಡರು. ನಂತರದಲ್ಲಿ ಮಕ್ಕಳ ವಿಧ್ಯಾಭ್ಯಾಸ ಮುಗಿದು, ಅವರು ಕೆಲಸಕ್ಕೆ ಸೇರಿ ಅವರುಗಳಿಗೆ ಮದುವೇ ಮತ್ತು ಇತರ ಸಮಾರಂಭಗಳನ್ನು ಮಾಡಿ ಮುಗಿಸುವ ಹೊತ್ತಿಗೆ, ರಾಮಯ್ಯನವರ ನಿವೃತ್ತಿಯ ಸಮಯವೂ ಬಂದಿತು. ತಮ್ಮ ದುಡಿಮೆ ಮತ್ತು ಪತ್ನಿಯ ಸಹಕಾರದಿಂದ, ಜೀವನದ ಏಳು ಬೀಳು, ಕಷ್ಟಸುಖ, ಜೀವನದ ಜಂಜಾಟ ಮತ್ತು ಜವಾಬ್ದಾರಿಗಳನ್ನು ಸಮರ್ಪಕವಾಗಿ ಪೂರೈಸಿದ್ದರು!!

ನಿವೃತ್ತರಾದಮೇಲೆ, ತಮ್ಮ ಜೀವನ ಸಂಜೆಯನ್ನು ತಮ್ಮವರೊಂದಿಗೆ ಆರಾಮವಾಗಿ ಕಳೆಯಬೇಕೆಂದು ಕೊಂಡಿದ್ದ ರಾಮಯ್ಯನವರಿಗೆ ಮತ್ತು ಜಾನಕಮ್ಮನವರಿಗೆ, ಬದಲಾದ ಮನೆಯ ಪರಿಸ್ಥಿತಿಯನ್ನು ನೋಡಿ ಮನಸ್ಸಿಗೆ ನೋವು ಉಂಟಾಗುತ್ತಿತ್ತು! ಒಳ್ಳೆಯ ಸಭ್ಯತೆ, ಸಂಸ್ಕಾರಗಳನ್ನು ನೀಡಿ ಬೆಳೆಸಿದ್ದ ಮಕ್ಕಳೂ ತಮ್ಮ ತಮ್ಮ ಮದುವೆಯ ನಂತರ ಅವರುಗಳ ಬದಲಾದ ಬುದ್ಧಿಯನ್ನೂ ಕಂಡು ದಂಪತಿಗಳಿಗೆ, ಅಲ್ಲಿನ ಸ್ಥಿತಿ ಅಸಹನೀಯವೆನಿಸುತ್ತಿತ್ತು....!
ಇದೆ ಕೊರಗಿನಲ್ಲೇ ಒಂದು ದಿನ ಜಾನಕಮ್ಮನವರು ಕೊನೆಯುಸಿರೆಳೆದರು. ಪತ್ನಿಯ ಅಗಲಿಕೆಯ ನೋವಿಗಿಂತಾ ಹೆಚ್ಚಾಗಿ, ತಮ್ಮ ಮಕ್ಕಳ ನಡವಳಿಕೆ, ಸೊಸೆಯರ ದಬ್ಬಾಳಿಕೆ, ಉದಾಸೀನ ಎಲ್ಲವನ್ನೂ ಅನುಭವಿಸುತ್ತಿದ್ದ ರಾಮಯ್ಯನವರಿಗೆ ಜೀವನವೇ ಭಾರವಾಗಿತ್ತು.

ಮನೆ ಮತ್ತು ಮಕ್ಕಳ ಏಳಿಗೆಗಾಗಿ ತಮ್ಮ ಜೀವನ ಸವೆಸಿದ್ದ ದಂಪತಿಗಳಿಗೆ ಜೀವನ ಸಂಧ್ಯೆಯಲ್ಲಿ ಸುಖ ಸಂತೋಷ ಎಂಬುದು ಮರೀಚಿಕೆಯಾಗಿತ್ತು! ಈಗ ರಾಮಯ್ಯನವರು ನೊಂದ ಒಂಟಿ ಜೀವ.
ತಮ್ಮ ಕಾಲದಲ್ಲಿ ಹಿರಿಯರಿಗೆ ಸಿಗುತ್ತಿದ್ದ ಗೌರವ, ಬದಲಾದ ಈ ಕಾಲದಲ್ಲಿ ತಮಗೆ ಸಿಗುತ್ತಿರುವ ಈ ರೀತಿಯ ಗೌರವ ಎರೆಡನ್ನೂ ನೆನೆದು ಅವರ ದುಃಕ್ಕದ ಕಟ್ಟೆಯೊಡೆದು ಕಣ್ಣಂಚಿನಲ್ಲಿ ನೀರು ಜಿನುಗಿತ್ತು!
ತಂದೆಯಿಂದ ಬಂದ ಮನೆ ಮತ್ತು ಆಸ್ತಿಯನ್ನು ಅನುಭವಿಸುವುದು ತಮ್ಮ ಹಕ್ಕೆಂದು ತಿಳಿದ ಮಕ್ಕಳು, ಅದಕ್ಕೆ ಕಾರಣರಾದವರನ್ನೇ ಭಾರ, ಬೇಕಾಬಿಟ್ಟಿ ಎಂದು ಭಾವಿಸುವ ಮಕ್ಕಳಿಗೆ, ಆ ಹಿರಿ ಜೀವ ಆ ನೊಂದ ಮನಸ್ಸಿನಲ್ಲೂ ತಮ್ಮ ಮಕ್ಕಳಿಗೆ ಒಳ್ಳೆಯದು ಮಾಡೆಂದು ದೇವರಲ್ಲಿ ಪ್ರಾರ್ಥಿಸುತ್ತಾ, ಭಾರವಾದ ಮನಸ್ಸಿನಿಂದ ಮನೆ ಕಡೆಗೆ ಹೆಜ್ಜೆ ಹಾಕಿದರು........!!!


ಇಲ್ಲಿ ಬರೆದಿರುವ ಈ 'ಸಣ್ಣ ಕಥೆ' ಸಮಾಜದಲ್ಲಿ ನೈಜ ಘಟನೆಯೂ ಇರಬಹುದು! ಎಲ್ಲರೂ ಹೀಗೆ ಇರುತ್ತಾರೆಂದೇನೂ ಇಲ್ಲಾ.
ಇದು ಕೇವಲ ನಾಣ್ಯದ ಒಂದು ಮುಖದಂತೆ ಎಂದರೆ ತಪ್ಪಾಗಲಾರದು ಅಲ್ಲವೇ?

Monday, June 14, 2010

ಕನಸು.. ನನಸು... ಮನಸು....!!


ಹುಟ್ಟಿದ್ದು ಯಾಕೇಂತ ಗೊತ್ತಿಲ್ಲಾ ?
ಜೀವನದ ಗುರಿಯೂ ತಲುಪಿಲ್ಲ .....

ಭವಿಷ್ಯಕ್ಕಾಗಿ ಕನಸೊಂದಷ್ಟು ಇಹುದಲ್ಲ !
ನನಸಾಗುವುದೆಂತೋ ಅದು ಮಾತ್ರ ತಿಳಿದಿಲ್ಲಾ .

ಧ್ಯೇಯವ ಸಾಧಿಸುವ ಛಲವ ಬಿಡಲಿಲ್ಲ .....
ಆದರೇಕೋ ಅದೃಷ್ಟವೆಂಬುದು ಒಲಿಯುತಲಿಲ್ಲ,

ಮನದಾಸೆ ಯಾವುದೂ ಕೈಗೂಡಲಿಲ್ಲ ;
ಬದುಕುವ ಆಸೆಯು ಕರಗುತಿಹುದಲ್ಲ ~~~~~

ಇಷ್ಟಾದರೂ ಸ್ವಪ್ನವ ಕಾಣುವುದ ಬಿಡಲಿಲ್ಲ !!
ಅಲ್ಲಾದರೂ ಸರಿ ಹರಸಲಿ ದೇವರುಗಳೆಲ್ಲ .....!!!!!

ಮನದ ಬಯಕೆಗಳು ಈಡೇರುತಿದೆಯಲ್ಲ ,
ಎನ್ನುತ್ತಾ ಕಣ್ಬಿಟ್ಟು ನೋಡಿದಾಗ ಶೂನ್ಯವೇ ಸುತ್ತೆಲ್ಲ ;

ಅದನೇ ನಿಜವೆಂದು ನಂಬಬಹುದಲ್ಲ ?!
ಎಚ್ಚೆತ್ತ ಮೇಲೆ ಸತ್ಯ ತಿಳಿಯುವುದಲ್ಲ ..!!

ನಿದ್ದೇಲೇ ಕಳೆದಾರೆ ಜೀವನವೆಲ್ಲಾ .....,
ಬದುಕು ಹೋರಾಟದ ಜಂಜಾಟವಿಲ್ಲ .

ಆದರೆ ಇದ್ಯಾವುದೂ ನಡೆಯುವುದಿಲ್ಲ ,
ಯಾಕೆಂದರೆ ಯಾವುದೂ ಶಾಶ್ವತವಲ್ಲ !!!

Saturday, May 22, 2010

ಬ್ಲಾಗಿಗರ ಕೂಟವಂತೆ .........!!!

ಆಗಸ್ಟ್ ೨೨ ರಂದು ಬ್ಲಾಗಿಗರ ಸಂತೋಷ ಕೂಟವಂತೆ.......!!! ಇದೆ ಸಂತೋಷದಲ್ಲಿ ಉತ್ಸಾಹಿಯಾಗಿ ಕಾಯುತ್ತಿದ್ದೇನೆ ಆ ದಿನ ಬರುವುದೆಂತೋ.....?
ಸ್ನೇಹಿತರೆ ಈ ಸಂತೋಷ ಸಮಾರಂಭದಲ್ಲಿ ಯಾರ್ಯಾರು ಭೇಟಿಯಾಗುತ್ತಾರೋ ಗೊತ್ತಿಲ್ಲ. ಆದರೆ ಇದೆ ಖುಷಿಯಲ್ಲಿ, ನನ್ನ ಹುಚ್ಚು ಮನಸ್ಸಿನ ಒಂದು ಪುಟ್ಟ ಕವನ.....!?!


ಬ್ಲಾಗಿಗರ ಕೂಟ
ನಲಿವಿನ ನೋಟ
ಹರಟೆಯ ತೋಟ

ಪರದೆಯ ಆಟ
ಮುಗಿಸುವ ಮಾಟ
ಕರೆಸಿದೆ ಕೂಟ

ಬೆರೆಯುವ ಆಟ
ಕಲೆಸಿದೆ ಪಾಠ
ಒಲವಿನ ಊಟ

ಸಮಯದ ಓಟ
ಆಗಲಿ ದಿಟ
ಸೇರುವರೆಲ್ಲರು ಪಟ, ಪಟ......!!!!!

Friday, January 1, 2010

ಶುಭಾಶಯ

"ಬ್ಲಾಗ್ ಲೋಕದ ಸ್ನೇಹಿತರೆಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು......!"

Monday, November 2, 2009

ನಾವು ಅಮಾಯಕರು......!

ಕಳೆದ ಬೇಸಿಗೆ ರಜೆಯಲ್ಲಿ, ನನ್ನ ಒಬ್ಬ ಅಕ್ಕನನ್ನು ಬಿಟ್ಟು ಬೇರೆಯವರೆಲ್ಲಾ ನಮ್ಮ ಮನೆಯಲ್ಲಿ ಸೇರಿದ್ದರು ಎಂದು ರಜಾ ಮಜಾ ಲೇಖನದಲ್ಲಿ ನಿಮಗೆಲ್ಲಾ ತಿಳಿಸಿದ್ದೆ ಅಲ್ಲವೇ?!

ಅದಕ್ಕೇನೀಗ ಅಂತೀರಾ, ಬೈಕೋಬೇಡಿ ಪ್ಲೀಸ್.....! ಸರಿ ಸರಿ ಮುಂದಕ್ಕೆ ಓದಿ ಆಯಿತಾ.

ನಮ್ಮಮ್ಮ ರಜದಲ್ಲಿ ಇಲ್ಲಿಗೆ ಬರೋಕೆ ಮುಂಚೆ, ಬಂದಿದ್ದಾಗ, ಬಂದು ಹೋದಮೇಲೆ ಫೋನ್ ನಲ್ಲಿ......, ಹೀಗೆ ಒಂದೇ ಸಮ ನನ್ನ, ಅವರ ಮನೆಗೆ (ತವರಿಗೆ) ಬರುವಂತೆ ಪೀಡಿಸುತ್ತಿದ್ದರು!

ಇದೇನಿದು ಅಮ್ಮಂದಿರು ಕರೆದರೆ ಸಾಕು ತವರಿಗೆ ಹೋಗಲು ತುದಿಗಾಲಲ್ಲಿ ನಿಂತು, ಅವಕಾಶಕ್ಕಾಗಿ ಕಾಯೋ ಹೆಣ್ಣುಮಕ್ಕಳು ಇರುತ್ತಾರೆ! ಆದರೆ ನನ್ನನ್ನು ನೋಡಿದರೆ, ಅಮ್ಮ ಕಾಡಿಸುತ್ತಾರೆ, ಪೀಡಿಸುತ್ತಾರೆ ಅಂತೆಲ್ಲಾ ಬರೆದಿದ್ದೀನಿ ಅಂತ ಅಂದುಕೊಳ್ಳುತ್ತಿದ್ದೀರಾ? ಏನ್ಮಾಡೋದು ಹೇಳಿ, ನನ್ನ ಕಥೆನೇ ಒಂದು ಥರ ವಿಚಿತ್ರ!! ಇರಲಿ ಬಿಡಿ ಅದನ್ನ ಮುಂದೆ ಯಾವಾಗದರೊಮ್ಮೆ ನಿಮ್ಮ ಹತ್ರ ಹೇಳಿಕೊಬೇಕು ಅನಿಸಿದರೆ ಹೇಳ್ತೀನಿ..... ಓಕೆ!ಹಾಗಂತ ನಾನೇನು ತವರಿಗೆ ಹೋಗದೆ ಏನು ಇರ್ತಿರ್ಲಿಲ್ಲ, ನಮ್ಮ ಮಧ್ಯೆ ಏನೇ ಇದ್ದರೂ ನಾನಂತೂ ಸಹಜವಾಗೇ ಹೋಗಬೇಕಾದಾಗ ಹೋಗಿಬರುತ್ತಿದ್ದೆ.


ಆದರೆ ಈ ಸಲ ಸುತರಾಂ ನನಗೆ ಹೋಗಲು ಇಷ್ಟವಿರಲಿಲ್ಲ, ಅದಕ್ಕೆ ಬಲವಾದ ಕಾರಣವೂ ಇತ್ತು. ಎಷ್ಟು ಬರೋಲ್ಲ ಅಂತ ಹೇಳಿದರೂ ಸುಮ್ಮನೆ ಇರ್ತಾಇರಲಿಲ್ಲ ಅದಕ್ಕೆ ಒಂದು ಉಪಾಯ ಮಾಡಿ ಒಂದು ಕಾರಣ ಹೇಳ್ತಾ ಇದ್ದೆ ಅದೇನೆಂದರೆ, ಅಕ್ಕ ಬರಲಿ ಆಗ ನೋಡೋಣ ಅಂತ! ನನ್ನಕ್ಕನನ್ನು ಈ ಸಲ ತವರಿಗೆ ಕಳಿಸೋಲ್ಲ ಎನ್ನುವ ಧೃಡವಾದ ನಂಬಿಕೆ ಇತ್ತು ಅದಕ್ಕೆ ಕಾರಣ ಕಳೆದ ವರ್ಷ ಬೇಸಿಗೆ ರಜೆಯಲ್ಲಿ, ಆಕೆಯ ಚಿಕ್ಕ ಮಗನ ನಾಮಕರಣದ ಸಮಯದಲ್ಲಿ ಆಕೆಯ ಅತ್ತೆ ಮನೆಯವರು ಯಾವುದೋ ಕ್ಷುಲ್ಲಕ ಕಾರಣಕ್ಕೆ ಅಪ್ಪ, ಅಮ್ಮನೊಂದಿಗೆ ಗಲಾಟೆ/ಜಗಳ ಮಾಡಿಕೊಂಡಿದ್ದರು! ಈ ಗಲಾಟೆಯಾದ ನಂತರದಲ್ಲಿ ಆಗಾಗ ಆಕೆಯನ್ನು ಆ ಊರಿಗೆ ಅವರು ಕರೆದುಕೊಂಡು ಬಂದಿದ್ದರೂ, ಅವಳನ್ನು ತವರಿಗೆ ಕಳುಹಿಸಿರಲಿಲ್ಲ ಆದ್ದರಿಂದ. ಅದೂಅಲ್ಲದೆ ಒಂದು ವರ್ಷ ಕಳೆಯುವುದರೊಳಗಾಗಿ, ಅವರುಗಳ ಕೋಪವೂ ಸ್ವಲ್ಪ ಕರಗಿ ಮೂರನೆಯವರ ಮುಖಾಂತರ, ಉಗಾದಿ ಹಬ್ಬಕ್ಕೆ ಅವರು ಬಂದು ಕರೆದರೆ ಕಳುಹಿಸುತ್ತೇವೆ ಎಂದು ಹೇಳಿದ್ದರು.


ಅವರ ಮಾತಿನ ಪ್ರಕಾರವೇ, ಅಪ್ಪ ಹೋಗಿ ಹಬ್ಬಕ್ಕೆ ಮತ್ತು ರಜಕ್ಕೆ ಕರೆದುಬಂದಿದ್ದರೂ ಅವರು ಮಾತು ಉಳಿಸಿಕೊಳ್ಳಲಿಲ್ಲ, ಹಾಗಾಗಿ ಹಬ್ಬಕ್ಕೆ ಆಕೆಯನ್ನು ಕಳುಹಿಸಿರಲಿಲ್ಲ. ಸರಿ ಈಗ ಪರೀಕ್ಷೆಯ ಸಮಯ ದೊಡ್ಡ ಮಗನಿಗೆ ಶಾಲೆ ತಪ್ಪಿಸಿ ಬರಲಾಗುವುದಿಲ್ಲ ರಜದಲ್ಲಿಯಾದರು ಬರುತ್ತಾಳೆನೋ ನೋಡೋಣ ಅಂತ ಸಮಾಧಾನ ಪಟ್ಟುಕೊಂಡಿದ್ದರು. ಹಬ್ಬ, ಪರೀಕ್ಷೆ, ಫಲಿತಾಂಶ ಸಮಯ ಎಲ್ಲಾ ಮುಗಿಯಿತು, ಊ.... ಹ್ಞೂ....! ಅವಳು ಬರಲೇ ಇಲ್ಲ. ಇದರಿಂದ ನಮಗೆಲ್ಲಾ ಬೇಸರವಾಗಿದ್ದರೂ ನನಗಂತೂ ಒಂದು ಬಲವಾದ ಕಾರಣ ಸಿಕ್ಕಿತ್ತಲ್ಲ, ಅದೇ ಖುಷಿ!! ಆದರೆ ನನ್ನ ದೊಡ್ಡಕ್ಕ (ದೊಡ್ಡಮ್ಮನ ಮಗಳು) ರಜೆಯ ಪ್ರಾರಂಭದಲ್ಲೇ ಅವರು ತಮ್ಮ ತವರಿಗೆ ಒಂದು ಭೇಟಿ ನೀಡಿಯಾಗಿತ್ತು, ನಮ್ಮ ಮನೆಗೆ ಬರುವುದಕ್ಕೆ ಮುಂಚೆನೆ! ಇದನ್ನೂ ಸೇರಿಸಿ ಅಮ್ಮನಿಗೆ, ನೋಡು ಲಕ್ಷ್ಮಿ ಅಕ್ಕ ಬಂದಾಗ ಪುಷ್ಪಕ್ಕನೂ ಮತ್ತೆ ಊರಿಗೆ ಬರುತ್ತೀನಿ ಅಂತ ಒಪ್ಪಿಕೊಳ್ಳಲಿ ಆಗ ನಾನು ಬರುವುದರ ಬಗ್ಗೆ ಯೋಚನೆ ಮಾಡುತ್ತೇನೆ ಅಲ್ಲಿವರೆಗೂ ಈ ವಿಷಯವಾಗಿ ನನ್ನ ಮಾತಾಡಿಸಬೇಡ ಆಯಿತಾ....., ಅಂತ ಹೇಳಿ ತಪ್ಪಿಸಿಕೊಂಡಿದ್ದೆ! ಈ ಮಾತಿಗೆ ನನ್ನ ದೊಡ್ಡ ಅಕ್ಕಾನೂ, ಹೌದು ಅವಳು (ಲಕ್ಷ್ಮಿ) ಅಕಸ್ಮಾತ್ ಬಂದರೆ ನೋಡೋಣ ಇಲ್ಲಾಂದರೆ ಸಧ್ಯಕ್ಕೆ ನಾನಂತೂ ಮತ್ತೆ ಊರಿಗೆ ಹೋಗೋಲ್ಲ ಅಂತ ಹೇಳಿ ಅಷ್ಟಕ್ಕೆ ಸುಮ್ಮನಿರದೆ, ನನ್ನ ಕುರಿತು, ಅವಳು ಬರಲಿಲ್ಲ ನೀನೂ ಹೋಗಿಲ್ಲಾ ಅಂದರೆ ನಿಮ್ಮಮ್ಮನಿಗೆ ಬೇಜಾರಾಗೊಲ್ವ ಒಂದೆರಡು ದಿನದ ಮಟ್ಟಿಗೆ ಹೋಗಿಬಾ ಎಂದು ಎತ್ತಿ ಕಟ್ಟಿದರು. ನಮ್ಮಮ್ಮನಿಗೆ ಅಷ್ಟೇ ಸಾಕಾಯಿತು, ಚೂಡಮ್ಮ....ಗೀಡಮ್ಮ (ನೋಡಮ್ಮ) ಎಂದೆಲ್ಲಾ ಶುರು ಮಾಡಿಕೊಂಡರು. ನಾನಾಗ, ನೋಡಿ ಬರಲ್ಲ ಅಂದಮೇಲೆ ಮುಗಿಯಿತು, ಎಷ್ಟು ಸಲ ಹೇಳೋದು ಅದೂ ಅಲ್ಲದೆ ನೀವೇ ಎಲ್ಲಾ ಬಂದು ನೋಡಿದ್ದೀರಲ್ಲ ಇನ್ನು ನಾನ್ಯಾಕೆ, ಸುಮ್ಮಸುಮ್ಮನೆ ಊರಿಗೆ ಬೇರೆ ಬರಬೇಕು? ಇನ್ನು ಇದರ ಬಗ್ಗೆ ಜಾಸ್ತಿ ಮಾತಾಡಿದರೆ ಅಷ್ಟೇ......ಅಂತ ಸ್ವಲ್ಪ ಕೋಪವಾಗೆ ಹೇಳಿದೆ. ಇಷ್ಟಾದ ಮೇಲೆ, ನನ್ನ ಜಗಮೊಂಡಿ....., ಹಠಮಾರಿ ಅಂತ ಒಂದೆರಡು ಬಿರುದು ಕೊಟ್ಟು ಅಮ್ಮ ತಮ್ಮ ಅಹಂ ಅನ್ನು ಸಮಾಧಾನ ಪಡಿಸಿಕೊಂಡರು!!!


ಸ್ವಲ್ಪ ದಿನಗಳ ನಂತರ ನನ್ನ ತಮ್ಮ ಫೋನ್ ಮಾಡಿ, ಅಕ್ಕ ಬಂದಿದಾಳೆ ನೀನು ಬೇಗ ಬಾ, ಯಾವಾಗ ಬರ್ತೀಯ ಎಂದು ಕೇಳಿದ. ಅದಕ್ಕೆ ನಾನು, ಹೋಗೋ ಸುಮ್ಮನೆ, ನಾನೇನು ನನ್ನ ಕಿವೀಲಿ ಕಾಲೀ ಫ್ಲವರ್ ಇಟ್ಟುಕೊಂಡಿಲ್ಲ. ಯಾರನ್ನು ಫೂಲ್ ಮಾಡ್ತೀಯಾ, ಬೇರೆ ಯಾರನ್ನಾದರೂ ನೋಡಿಕೋ ನನ್ನ ಬಿಟ್ಬಿಡು, ಬಾಯ್ ಅಂತ ಹೇಳುತ್ತಿದ್ದ ಹಾಗೆ, ನಿಜವಾಗಲೂ, ಪ್ರಾಮಿಸ್ ಬೇಕಾದರೆ ನೀನೆ ಮಾತಾಡು ಅಂತ ಹೇಳಿ ಅಕ್ಕನಿಗೆ ಫೋನ್ ಕೊಟ್ಟೆಬಿಟ್ಟ (ಪಾಪ ಚೆನ್ನಾಗೇ ಆಟ ಆಡ್ಸಿದ್ದೀನಿ ಅವನ್ನ). ಅಕ್ಕನೊಂದಿಗೆ ಮಾತಾಡಿ ಉಭಯ ಕುಶಲೋಪರಿ ವಿಚಾರಿಸಿಕೊಂಡು, ಆಕೆ ಬಂದಿರೋದನ್ನ ಪ್ರಸ್ತುತ ಪಡಿಸಿಕೊಂಡ ನಂತರ ಆಕೆ ನನಗೆ ಗೋಗರೆಯಲು ಶುರು ಮಾಡಿದಳು. ಪ್ಲೀಸ್ ಬಾರೆ ನನಗೋಸ್ಕರ ಬಾರೆ, ನಿಮ್ಮನ್ನೆಲ್ಲಾ ನೋಡಬೇಕು ಅನ್ನಿಸುತ್ತಿದೆ, ಪುಷ್ಪಕ್ಕನೂ ಬರುತ್ತಾಳೆ, ಬಾರೆ ಎಂದೆಲ್ಲಾ ವಿಧವಿಧವಾಗಿ ಪುಸಲಾಯಿಸುತ್ತಿದ್ದಳು! ಅದಕ್ಕೆ ನಾನು ಆಹಾ ಅಮ್ಮಣ್ಣಿ ನೀನು ಬಂದು ಬಿಟ್ಟಿದ್ದೀಯ ಅಂತ ನಾವೆಲ್ಲಾ ನಿನ್ನ ನೋಡೋಕೆ ಬಂದು ಬಿಡಬೇಕಾ? ಏನು ಮಹಾರಾಣಿ ನೀನು, ಹೋಗೆ ಬರೋಲ್ಲ ಅಂತಂದೆ (ಅವಳ ಮಗನ ನಾಮಕರಣದಲ್ಲಿ ನಮ್ಮನ್ನೆಲ್ಲಾ ಅವಳು ಸರಿಯಾಗಿ ಮಾತನಾಡಿಸಿರಲಿಲ್ಲ, ಆ ಬೇಸರ ಬೇರೆ ಇತ್ತು ಅದಕ್ಕೆ.) ಮತ್ತೆ ನೀನೆ ನಮ್ಮ ಮನೆಗೆ ಬಾ, ನಾನು ಬರೋಲ್ಲ ಅಂತ ಹೇಳಿದೆ. ಅದಕ್ಕವಳು, ಪ್ಲೀಸ್ ಕಣೆ ಇಲ್ಲಿಗೆ ಕಳುಹಿಸುವುದಕ್ಕೆ ಅವರು ಏನೆಲ್ಲಾ ಕಂಡೀಷನ್ ಹಾಕಿದ್ದಾರೆ ಗೊತ್ತಾ.... ಅರ್ಥ ಮಾಡಿಕೊ, ಬೇರೆ ಎಲ್ಲೂ ಹೋಗೋ ಹಾಗೆ ಇಲ್ಲ ನಿನಗೆ ಗೊತ್ತಿಲ್ಲದೆ ಇರೋದು ಏನಿದೆ ಹೇಳು ಎಂದಳು. ಸರಿ ಸರಿ ಪುಷ್ಪಕ್ಕನ್ನ ಕೇಳ್ತೀನಿ ಆಕೆ ಒಪ್ಪಿಕೊಂಡರೆ ಸರಿ ಇಲ್ಲಾಂದರೆ ನೀನೆ ಒಪ್ಪಿಸಬೇಕು ಇಷ್ಟು ಹೇಳಿ ಲೈನ್ ಕಟ್ ಮಾಡಿದೆ.


ದೊಡ್ದಕ್ಕನೊಂದಿಗೆ ಮಾತಾಡಿಕೊಂಡು ನಾವಿಬ್ಬರೂ ಕೂಡಿ ಕಳೆದು ಲೆಕ್ಕಾಚಾರ ಮಾಡಿ ನಂತರ ಇಬ್ಬರೂ ಹೋಗಲು ನಿಶ್ಚಯಿಸಿಕೊಂಡೆವು! ಮೇ ನಲ್ಲಿ ಅರ್ಧ ತಿಂಗಳು ಕಳೆದೆ ಹೋಗಿತ್ತು, ಆಗ ಬಂದಿದ್ದಳು ನಮ್ಮ ಮಹರಾಯಿತಿ.


ಅಂದುಕೊಂಡಂತೆ ನಾವಿಬ್ಬರೂ ಸೋಮವಾರ ಊರಿಗೆ ತಲುಪಿದೆವು. ಆಕೆಗೆ ಅವರೂರಿಂದ ಬಂದು ತಲುಪಲು ೫ ಗಂಟೆ ಕಾಲ ಬೇಕು ಅದೂ ನೇರ ಬಸ್ ಸಿಕ್ಕಿದರೆ ಇಲ್ಲಾಂದರೆ ಇನ್ನೂ ಲೇಟ್ ಆಗಿಬಿಡುತ್ತೆ. ನಾನು ಬೇಗ ತಲುಪಿದ್ದೆ. ಆಕೆ ಬರುವಷ್ಟರಲ್ಲಿ ಹನ್ನೊಂದು ಗಂಟೆಯಾಗಿತ್ತು. ಸೀದಾ ನಮ್ಮ ಮನೆಗೆ ಬಾ ಅಂತ ಹೇಳಿದ್ದರೂನೂ ಅವರಮ್ಮ ಎಲ್ಲಿ ಕೋಪ ಮಾಡಿಕೊಂಡು ಬಿಡುತ್ತಾರೋ ಅಂತ ಆಕೆ ಅವರ ಮನೆಗೆ ಒಂದು ಭೇಟಿ ನೀಡಿ ಆಮೇಲೆ ಬಂದರು.

ಮುಂದುವರೆಯುವುದು.......!

ಕೈಗೆ ಪೆಟ್ಟಾಗಿದ್ದ ಕಾರಣ ಈ ಲೇಖನವನ್ನು ಒಮ್ಮೆಲೇ ಮುಗಿಸಲಾಗಿರಲಿಲ್ಲ. ಇದರ ಮುಂದುವರಿದ ಭಾಗ ಆದಷ್ಟು ಬೇಗ ಬರೆಯುತ್ತೇನೆ.

Friday, October 9, 2009

ಅಕ್ಕನ ಅವಾಂತರ.....!






ಬಹಳ ವರ್ಷಗಳ ಹಿಂದಿನ ಮಾತು, ಆಗ ಅಕ್ಕನ ಮದುವೆ ನಿಶ್ಚಯವಾಗಿತ್ತು! ನಾವೆಲ್ಲ ಇದ್ದದ್ದು ಬೆಂಗಳೂರಿನಲ್ಲೇ ಆದರೂ, ಆಕೆಯ ಮದುವೆಯನ್ನು ಊರಿನಲ್ಲಿ ಮಾಡಬೇಕೆಂದು ಹಿರಿಯರು ನಿಶ್ಚಯಿಸಿದ್ದರು. ಏಕೆಂದರೆ ವಧು-ವರ ಇಬ್ಬರ ಮನೆಯವರಿಗೂ ಕಾಮನ್ ಊರು ಅದಾಗಿತ್ತು ಮತ್ತು ನಮ್ಮ ಹೆಚ್ಚಿನ ನೆಂಟರು, ಬಂಧು ಬಳಗ ಎಲ್ಲ ಆ ಊರಿನಲ್ಲೇ ಇರುವುದು.
ನಮಗೆ ಆ ಊರಲ್ಲಿ ಸ್ವಂತ ಮನೆ ಇರಲಿಲ್ಲ, ಆದರೆ ತಂದೆಗೆ ಬರಬೇಕಿದ್ದ ಜಾಗದ ಪಾಲು ಒಬ್ಬ ದೊಡ್ಡಪ್ಪನ ಮನೆಯೊಂದಿಗೆ ಬೆಸೆದುಕೊಂಡಿತ್ತು. ಬೇರೆ ಇನ್ನಿಬ್ಬರು ದೊಡ್ದಪ್ಪಂದಿರು ಅದೇ ಊರಿನಲ್ಲೇ ಇದ್ದರೂ, ನಾವು ಊರಿಗೆ ಹೋದಾಗಲೆಲ್ಲ ನಮ್ಮ ತಂದೆಯ ಪಾಲಿದ್ದ ದೊಡ್ಡಪ್ಪನ ಮನೆಯಲ್ಲಿಯೇ ತಂಗುತ್ತಿದ್ದೆವು! ಅದಕ್ಕೆ ಇನ್ನೊಂದು ಕಾರಣವೇನೆಂದರೆ, ಈ ದೊಡ್ಡಪ್ಪನ ಹೆಂಡತಿ ಅಂದರೆ ದೊಡ್ಡಮ್ಮ ನನ್ನ ತಾಯಿಯ ಅಕ್ಕನೂ ಆಗಿದ್ದರು ಆದ್ದರಿಂದ ಬೇರೆಯವರಿಗಿಂತಾ ನಮಗೆ ಇವರಲ್ಲಿಯೇ ಹೆಚ್ಚಿನ ಸಲುಗೆ ಇತ್ತು!



ಸರಿ, ಇನ್ನೇನು ಮದುವೆ ದಿನಗಳು ಹತ್ತಿರ ಬರುತ್ತಿದ್ದವು, ಮನೆಯ ಮಕ್ಕಳು, ನೆಂಟರು ಬಂಧು ಬಳಗ ಇವರೆಲ್ಲರಿಂದ ಮನೆ ಗಿಜಿಗುಡುತ್ತಿತ್ತು! ಇಷ್ಟೇ ಅಲ್ಲದೆ ಕೆಲಸವಿದ್ದಾಗ ಅಥವಾ ಸಂಜೆಯ ಬಿಡುವಿನ ವೇಳೆಯಲ್ಲಿ ಅಕ್ಕಪಕ್ಕದ ಮನೆಯ ಬಂಧುಗಳೂ ಬಂದು ಹೋಗುತ್ತಿದ್ದರು!! ಹೀಗಿರುವಾಗ ಅದೊಂದು ದಿನ ಸಂಜೆ, ಕಾಫಿ/ಟೀ ಸಮಯ. ಅಷ್ಟೊಂದು ಜನಕ್ಕೂ ನನ್ನ ದೊಡ್ಡ ಅಕ್ಕ ಮತ್ತು ಅತ್ತಿಗೆ ಸೇರಿ ಕಾಫಿ, ಟೀ ಯಾರ್ಯಾರಿಗೆ ಯಾವುದು ಬೇಕು ಎಂದು ಕೇಳಿ ಮಾಡಿ ಕೊಟ್ಟರು. ನಾನು ಎಲ್ಲರಿಗೂ ಸಪ್ಲೈ ಮಾಡಿದೆ, ಎಲ್ಲರೂ ಕುಡಿದು ಮುಗಿಸುವ ವೇಳೆಗಾಗಲೇ ಕತ್ತಲಾಗುತ್ತಾ ಬಂತು. ಸಂಜೆ ಎಂದಿನಂತೆ ಮನೆಯಲ್ಲಿ ವಿದ್ಯುತ್ ದೀಪ ಮತ್ತು ದೇವರ ಮುಂದೆ ಎಣ್ಣೆಯ ದೀಪ ಬೆಳಗಿಸಿ ಎಲ್ಲರೂ ಅವರವರ ಕೆಲಸಗಳಲ್ಲಿ ವ್ಯಸ್ತರಾಗಿದ್ದರು.



ಆ ಸಮಯದಲ್ಲಿ ಅದೇ ಓಣಿಯಲ್ಲಿ ವಾಸವಿರುವ ನಮ್ಮ ನೆಂಟರೊಬ್ಬರ ಮಗ ನಮ್ಮ ಮನೆಗೆ ಬಂದರು. ನಮ್ಮ ಊರಿನ ಜನರಲ್ಲೇ ಅವರು ಸ್ವಲ್ಪ ಶಿಫಾರಸ್ಸಿರುವ ವ್ಯಕ್ತಿ, ಯಾವುದೋ ಕೆಲಸ ಹೇಳಿದ್ದರಿಂದ ಆ ಕೆಲಸ ಆಯಿತೋ ಇಲ್ಲವೊ ಎಂದು ಕೇಳಿ ತಿಳಿಯಲು ಮನೆಗೆ ಬಂದಿದ್ದರು. ಅವರನ್ನು ಬರಮಾಡಿಕೊಂಡು ಕೂರಲು ಹೇಳಿ, ಅವರೂ ಕುಳಿತುಕೊಳ್ಳುತ್ತಿದ್ದಂತೆಯೇ, ಅದೇ ಸಮಯಕ್ಕೆ ಸರಿಯಾಗಿ ಕರೆಂಟ್ ಹೊರಟುಹೋಯಿತು! ಆ ಕಾಲದಲ್ಲಿ ಮಧ್ಯಮ ವರ್ಗದ ಮನೆಗಳಲ್ಲಿ, ಮೇಣದ ಬತ್ತಿ ಅಥವಾ ಚಿಮಣಿ ದೀಪ ಬಿಟ್ಟರೆ ಬೇರೆ ಯಾವುದೇ ಸಾಧನಗಳಿರಲಿಲ್ಲ. ಅವಸರದಲ್ಲಿ ಒಂದೇ ಒಂದು ಮೇಣದ ಬತ್ತಿ ಬಿಟ್ಟರೆ ಆ ಸಂಧರ್ಭದಲ್ಲಿ ಬೇರೆ ಏನೂ ಕೈಗೆ ಸಿಕ್ಕಿರಲಿಲ್ಲ , ಆ ಕ್ಷಣಕ್ಕೆ ಅದನ್ನೇ ಬೆಳಗಿಸಿ ಹಾಲಿನಲ್ಲಿ ತಂದು ಇಟ್ಟಿದ್ದರು! ಆ ಮಬ್ಬು ಬೆಳಕಿನಲ್ಲಿ ಒಬ್ಬರಿಗೊಬ್ಬರು ಅಸ್ಪಷ್ಟವಾಗಿ ಕಾಣುತ್ತಿದ್ದರು. ದೊಡ್ಡಮ್ಮ ಅವರೊಂದಿಗೆ ಮಾತಿಗಿಳಿದರು!


ಕಾಫಿ ಕುಡಿಯಪ್ಪಾ ರವಿ ಎಂದು ದೊಡ್ಡಮ್ಮ ಕೇಳಿದಾಗ ಅವರು, ಇಲ್ಲ ಬೇಡ ಈಗ ತಾನೇ ಆಯಿತು ಎಂದು ಹೇಳಿದರು. ಅದಕ್ಕೆ ದೊಡ್ಡಮ್ಮ ಮನೆಗೆ ಬಂದು ಏನು ತಗೊಳ್ಳದಿದ್ದರೆ ಹೇಗೆ, ನಮ್ಮೆಲ್ಲರದೂ ಸಹ ಈಗ ತಾನೇ ಆಯಿತು. ಕಾಫಿ ರೆಡಿಯಾಗೆ ಇದೆ, ಕುಡಿದೆ ಹೋಗಬೇಕು ಅಂತ ಬಲವಂತ ಮಾಡಿದರು. ಅಷ್ಟು ಬಲವಂತ ಮಾಡಿದ ಮೇಲೆ ಅವರು ಏನೂ ಹೇಳದೆ ಸುಮ್ಮನಾಗಿಬಿಟ್ಟರು. ನಂತರ ಅವರಿಗೆ ಯಾರಾದರೂ ಕಾಫಿ ತಂದುಕೊಡಿ, ಕೆಟಲ್ಲಿನಲ್ಲಿ ಕಾಫಿ ಸಿದ್ದವಾಗೆ ಇದೆ ಅದನ್ನೇ ಬಿಸಿ ಮಾಡಿ ಬೇಗ ತಗೊಂಡು ಬನ್ನಿ ಎಂದು ದೊಡ್ಡಮ್ಮ ಹೇಳಿದರು. ಮನೆಯಲ್ಲಿ ಅಷ್ಟೊಂದು ಜನ ಇದ್ದರೂ ಯಾರಾದರೂ ಹೋಗುತ್ತಾರೋ ಇಲ್ಲವೊ ಅಂತ ನನಗೆ ತರಲು ಹೇಳಿದರು. ನಾನು ಮಾಡುತ್ತಿದ್ದ ಕೆಲಸ ಬಿಟ್ಟು , ನಿಜ ಹೇಳಬೇಕೆಂದರೆ ಕತ್ತಲಲ್ಲಿ ಹೋಗಲು ಹೆದರಿಕೆಯಾಗಿ ಸ್ವಲ್ಪ ನಿಧಾನಿಸಿದೆ. ಅಡುಗೆ ಮನೆಗೆ ಹೋಗುವಷ್ಟರಲ್ಲಿ ನನ್ನ ಅಕ್ಕ ನನಗೆ ಮುಂಚೆ ಅಡುಗೆಮನೆ ಸೇರಿ ಕಾಫಿ ಎಲ್ಲಿದೆ ಎಂದು ಆ ಕತ್ತಲಲ್ಲಿ ಹುಡುಕುತ್ತಿದ್ದಳು. ಆಗ ಆಕೆಯ ಕೈಗೊಂದು ಬಿಸಿ ಕಾಫಿ ಇರುವ ಲೋಟ ಸಿಕ್ಕಿತು, ಬಿಸಿಯಾಗೇ ಇದೆ ಅಂತ ಅವಸರದಲ್ಲಿ ಅದನ್ನು ಹಾಗೆ ತೆಗೆದುಕೊಂಡು ಹೋಗಿ ಅವಳೇ ಸ್ವತಹ ಅವರಿಗೆ ನೀಡಿದಳು. ಅಷ್ಟರಲ್ಲಿ ಅವರ ಮಾತುಕಥೆ ಎಲ್ಲ ಮುಗಿದಿತ್ತು!! ಈಕೆ ಕೊಟ್ಟ ಕಾಫಿ ಕುಡಿದು ನಂತರ ನಾನಿನ್ನು ಹೊರಡುತ್ತೇನೆ ಎಂದು ಹೇಳಿ ಹೊರಟು ಹೋದರು!!!



ಮದುವೆ ಎಂದ ಮೇಲೆ ಸಾಕಷ್ಟು ಕೆಲಸಗಳಿರುತ್ತವಲ್ಲ, ಅದರೊಂದಿಗೆ ಚಿಕ್ಕಮಕ್ಕಳ ಆಟಪಾಠ, ಚೀರಾಟ ಮತ್ತು ದೊಡ್ಡವರ ಮಾತು ಕಥೆಗಳು ಇವುಗಳ ಮಧ್ಯೆ, ಕತ್ತಲಲ್ಲೂ ಕೆಲವರು ಅವರವರ ಕೆಲಸದಲ್ಲಿ ವ್ಯಸ್ತರಾಗಿದ್ದರು, ಇನ್ನು ಕೆಲವರು ಹರಟೆ ಹೊಡೆಯುತ್ತಿದ್ದರು ಮತ್ತೆ ಕೆಲವರು ಹಾಗೆ ವಿಶ್ರಮಿಸಿಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಕರೆಂಟ್ ಬಂದಿತು. ಚಿಕ್ಕ ಮಕ್ಕಳಿರುವವರು ನಿಮ್ಮ ಮಕ್ಕಳಿಗೆ ಊಟ ಮಾಡಿಸಿಬಿಡಿ ಎಂದು ದೊಡ್ಡವರು ಹೇಳುತ್ತಿದ್ದರು. ಸಾಮಾನ್ಯವಾಗಿ ಮಕ್ಕಳಿಗೆ ಬೇಗ ಊಟ ಮಾಡಿಸುವುದು ವಾಡಿಕೆ ಅಲ್ವಾ, ಅದಕ್ಕೆ!


ಆ ಊರಿನ ಜನರಿಗೆ ಒಂದು ವಿಚಿತ್ರವಾದ ಅಭ್ಯಾಸ! ಅದೇನೆಂದರೆ, ಅಲ್ಲಿನ ಜನ ಯಾರು ಕೇಳಿದರೂ, ಕೇಳದಿದ್ದರೂ ಅವರ ಮನೆಯಲ್ಲಿ ಬಿಸಿ ಅಡುಗೆ ಏನೇ ಮಾಡಿದ್ದರೂ ಅದು ಸಾಧಾರಣವಾದದ್ದಾದರೂ ಸರಿ ವಿಶೇಷವಾಗಿದ್ದರೂ ಸರಿ ಒಟ್ಟಿನಲ್ಲಿ, ಅದರಲ್ಲಿ ಸ್ವಲ್ಪ ಪಾಲನ್ನು ಅವರಿಗೆ ಬೇಕಾದವರ ಮನೆಗಳಿಗೆ ರವಾನಿಸುವ, ತಂದುಕೊಡುವ ಗೀಳು ಇದೆ. ಅಂದರೆ ಒಂದು ರೀತಿ ಹಂಚಿಕೊಂಡು ತಿನ್ನುವ ಅಭ್ಯಾಸ, ಸಹಬಾಳ್ವೆ ಅಂತ ಹೇಳಬಹುದು! ಅದರಲ್ಲೂ ಚಿಕ್ಕ ಮಕ್ಕಳು ಇರುವ ಮನೆ ಎಂದರೆ ಹೇಳುವುದೇ ಬೇಡ, ಮನೆಯಲ್ಲಿ ಮಾಡಿರುವುದಕ್ಕಿಂತಾ ಅವರಿವರು ತಂದು ಕೊಟ್ಟಂತಹ ತಿಂಡಿಗಳೇ ತುಂಬಿರುತ್ತವೆ. ಹಾಗಾಗಿ ನಮ್ಮ ಪಕ್ಕದ ಮನೆಯ ಇನ್ನೊಬ್ಬರು ದೊಡ್ಡಮ್ಮ ಇದ್ದರಲ್ಲ ಅವರು ರಾತ್ರಿಗೆಂದು ಮಾಡಿಕೊಂಡಿದ್ದ ರಸಂ ಅನ್ನು ಒಂದು ಗ್ಲಾಸಿನಲ್ಲಿ ಹಾಕಿ ತಂದುಕೊಟ್ಟಿದ್ದರು.


ಆಗ ಮನೆಯಲ್ಲಿ ಇದ್ದ ಪುಟಾಣಿಗಳು ಮೂರ್ನಾಕು ಮಂದಿ. ಆ ಮಕ್ಕಳಿಗೆಲ್ಲ ಯಾರಾದರು ಒಬ್ಬರೇ ತಿನಿಸೋಣ, ಆಟಾಡ್ತಾ ಒಬ್ಬರನ್ನೊಬ್ಬರು ನೋಡಿ ಬೇಗ ಬೇಗ ತಿಂತಾರೆ ಎಂದು ನಿರ್ಧರಿಸಿ ನನ್ನ ದೊಡ್ಡ ಅಕ್ಕಾನೆ ತಟ್ಟೆಯಲ್ಲಿ ಅನ್ನ ಬಡಿಸಿಕೊಂಡು, ಮಕ್ಕಳು ಏನೇನೋ ತಿಂದು ಹೊಟ್ಟೆ ಕೆಡಿಸಿಕೊಳ್ಳುತ್ತವೆ, ಅದಕ್ಕೆ ಅವರಿಗೆ ರಸಂನಲ್ಲೇ ಉಣಿಸೋಣ ಎಂದುಕೊಂಡು ರಸಕ್ಕಾಗಿ ಅಡುಗೆ ಮನೆಯೆಲ್ಲ ಹುಡುಕಾಡುತ್ತಾರೆ ಆದರೆ ರಸ ಮಾತ್ರ ಎಲ್ಲೂ ಸಿಗಲೇ ಇಲ್ಲ. ಆವಾಗ ಆಕೆ ನನ್ನನ್ನು ಕರೆದು ಚಿಕ್ಕಮ್ಮ (ಆಕೆಗೆ ಚಿಕ್ಕಮ್ಮ ಆದರೆ ನಮಗೆ ದೊಡ್ಡಮ್ಮ!) ರಸ ತಂದುಕೊಡುತ್ತೀನಿ ಅಂತ ಹೇಳಿದ್ದರು, ತಂದರೋ ಇಲ್ಲವೊ ಕೇಳು. ತಂದಿಲ್ಲದಿದ್ದರೆ ಅವರ ಮನೆಗೆ ಹೋಗಿ ತಗೊಂಡು ಬಾ ಅಂತ ಹೇಳಿದರು. ನನ್ನ ಆ ಇನ್ನೊಬ್ಬರು ದೊಡ್ಡಮ್ಮ ಅಲ್ಲೇ ಇದ್ದುದರಿಂದ ಅವರಲ್ಲಿ ಕೇಳಿದಾಗ, ಅವರು ಬರುವಾಗ ಜೊತೆಯಲ್ಲೇ ತಂದು ಕೊಟ್ಟೆನಲ್ಲಾ ಎಂದು ಹೇಳಿದರು. ನಾವು ಅಲ್ಲಿ ಹುಡುಕಿದರೂ ಸಿಗದೇ ಇದ್ದ ವಿಷಯ ಹೇಳಿದಾಗ ಆಶ್ಚರ್ಯದಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡರು.........!ಅವರು ರಸ ತಂದಿದ್ದನ್ನು ನೋಡಿದ್ದ ಒಂದಿಬ್ಬರು ತಂದಿದ್ದರೆಂದು ಸಾಕ್ಷಿ ಕೂಡ ಹೇಳಿದ್ದರು. ಮತ್ತೊಮ್ಮೆ ಅಡುಗೆ ಮನೆಗೆ ಬಂದು ಪರಿಶೀಲಿಸಿದಾಗ ಆ ಲೋಟ ಪಾತ್ರೆ ತೊಳೆಯುವ ಜಾಗದಲ್ಲಿ ಇತ್ತು! ಅದರಲ್ಲಿ ರಸ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ತಳದಲ್ಲಿ ಸ್ವಲ್ಪ ಗಟ್ಟಿ ಇರುವ ಅಂಶವು ಉಳಿದಿತ್ತು. ದೊಡ್ಡಕ್ಕ ಒಳಗಿನಿಂದ ಬರುತ್ತಾ, ಹೊರಗೆ ಇರುವವರಲ್ಲಿ ಹೇಳಿದರು ಅದೇನೆಂದರೆ, ರಸ ಇತ್ತು ಆದರೆ ಯಾರೋ ಚೆಲ್ಲಿ ಬಿಟ್ಟಿದ್ದಾರೆ ಇಲ್ಲಾಂದ್ರೆ ಯಾರಾದ್ರು ಕುಡ್ಕೊಂಡು ಬಿಟ್ಟಿರುತ್ತಾರೆ ಅಂತ!

ಆಗ ನಮ್ಮ ಮದುವಣ ಗಿತ್ತಿ ನಡೆದಿರಬಹುದಾದಂತ ವಿಷಯ ವನ್ನು ನೆನಪಿಸಿಕೊಂಡು ಬಿಡಿಸಿ ಹೇಳುತ್ತಾಳೆ, ಅದನ್ನು ಕೇಳಿ ಅಲ್ಲಿದ್ದವರೆಲ್ಲಾ ಬೆಸ್ತೋ ಬೇಸ್ತು! ಎಲ್ಲರಿಗೂ ಅರ್ಥವಾಗುತ್ತಿದ್ದಂತೆ ಮನೆಯ ಛಾವಣಿ ಕಿತ್ತುಹೋಗುವ ಮಟ್ಟಿಗೆ ನಾವೆಲ್ಲಾ ನಕ್ಕಿದ್ದೆವು!!!



ಏನೂ ಇನ್ನೂ ಗೊತ್ತಾಗಿಲ್ವಾ ಎಲ್ಲರೂ ಯಾಕೆ ನಕ್ಕಿದ್ದು ಅಂತ? ಅದೇ, ಕರೆಂಟ್ ಹೋದಾಗ ಗೆಸ್ಟ್ ಒಬ್ಬರು ಬಂದಿದ್ದರಲ್ಲ ಅವರಿಗೆ ಕತ್ತಲಲ್ಲಿ ನಮ್ಮ ಅಕ್ಕ ತಂದು ಕೊಟ್ಟಿದ್ದು ಏನು ಅಂತ ಅಂದುಕೊಂಡಿರಿ.............?!?! ಹ ಹ ಹ್ಹ ಹ್ಹ ಹ್ಹಾ ಹ್ಹಾ........, ಈಗಲೂ ನೆನಪಿಸಿಕೊಂಡರೆ ನನಗೆ ನಗು ತಡೆಯುವುದಕ್ಕೆ ಆಗುತ್ತಿಲ್ಲ. ಪಾಪ ಅವರು, ಕಾಫಿ ಅಂತ ಅಂದುಕೊಂಡು, ಕೊಟ್ಟಿದ್ದ ಬಿಸಿ ಬಿಸಿ ರಸಂ ಅನ್ನೇ, ಅಷ್ಟು ಜನರ ಮುಂದೆ ಏನೂ ಮಾತನಾಡದೇ ಕುಡಿದು ಎದ್ದು ಹೋಗಿದ್ದರು ಕತ್ತಲಲ್ಲೇ!




ವಾಸನೆಯಲ್ಲಿ ಗೊತ್ತಾಗಲಿಲ್ಲವೇ ಅಂತ ನೀವು ಕೇಳಬಹುದು, ಮೊದಲೇ ಮದುವೆಮನೆ ಎಷ್ಟೆಲ್ಲಾ ತರಹ ವಾಸನೆಗಳು ಸೇರಿಕೊಂಡಿರುತ್ತವೆ ಅದೂ ಅಲ್ಲದೆ ಮುಚ್ಚಿ ಇಟ್ಟಿದ್ದ ತಟ್ಟೆಯ ಸಮೇತ ತಂದು ಅವರ ಮುಂದೆಯೇ ತೆರೆದು ಕೊಟ್ಟಿದ್ದಳು! ಹೇಳಿಕೇಳಿ ಅವಳು ಮದುವೆ ಹುಡುಗಿ, ತನುವೆಲ್ಲೋ ಮನವೆಲ್ಲೂ ಒಟ್ಟಿನಲ್ಲಿ ಒಂದು ಅಚಾತುರ್ಯವಂತೂ ನಡೆದಿತ್ತು!!!







ಈಕೆಯ ಅವಾಂತರಗಳು ಇನ್ನಷ್ಟು ಇವೆ. ಮುಂದೆ ಯಾವಾಗಾದ್ರೂ ಇದೆ ರೀತಿ ಹೇಳ್ತೀನಿ, ಆಯ್ತಾ ಅಲ್ಲಿವರೆಗೂ ನಗ್ತಾನೆ ಇರಿ!!!!!

Tuesday, September 22, 2009

ಗೆಳತಿಗಾಗಿ......!

ಸ್ನೇಹಿತರೇ, ನನ್ನ ಅಗಲಿದ ಗೆಳತಿಯ ನೆನಪಿನಲ್ಲಿ, ಮತ್ತು ಮೊದಲ ಪ್ರಯತ್ನವಾಗಿ ಈ ಒಂದು ಪುಟ್ಟ ಕವಿತೆಯನ್ನು (ಅಂತ ನಾನು ಹೇಳ್ತಾ ಇದ್ದೀನಿ ಆದರೆ ಇದು ಕವಿತೆನಾ ಅಥವಾ ಆಲ್ವಾ ಅಂತ ನೀವು ತಿಳಿದವರು ಹೇಳಿ) ಬರೆಯುತ್ತಿದ್ದೇನೆ.......!



ನೀನೆಲ್ಲಿರುವೆ ನನ್ನ ಗೆಳತಿಯೇ?
ಕೂತಲ್ಲಿ ನಿಂತಲ್ಲಿ ಕನಸಲ್ಲಿ ನನಸಲ್ಲಿ
ಎಲ್ಲೆಲ್ಲೂ ನಿನ್ನ ನೆನಪೇ ನನ್ನ ಕಾಡುತಿಹುದಲ್ಲ
ಕಾಣದಂತೆ ನೀ ಏಕೆ ಹೀಗೆ ಮರೆಯಾದೆ ಸಖಿಯೇ!

ನನಗೆ ನೀನಿದ್ದೆ, ನಿನಗೆ ನಾನಿದ್ದೆ
ನಮ್ಮ ಕಷ್ಟ ಸುಖಗಳ ಹಂಚಿಕೊಳುವಲ್ಲಿ
ನಿನ್ನೆಲ್ಲಾ ಇಷ್ಟಾನಿಷ್ಟಗಳನ್ನು ಹೇಳಿದ್ದೆ ನನ್ನಲ್ಲಿ
ನಿನ್ನ ಮಾತು ಮೌನಗಳಿಗೆ ನಾ ಕಿವಿಯಾಗಿದ್ದೆ

ಮದುವೆಯಾಗಿ ವರ್ಷಗಳೈದು ಕಳೆದರೂ
ತುಂಬಿಲ್ಲ ಎನ್ನ ಮಡಿಲು ಎಂದು ಕೊರಗಿದ್ದೆ ನೀನು
ಅದೆಷ್ಟು ಸಾಂತ್ವನದ ನುಡಿಗಳನು ಹೇಳಿದ್ದೆ ನಾನು
ಅದಕಾಗಿ ಪೂಜೆ, ಪ್ರಾರ್ಥನೆಗಳನ್ನು ಮಾಡಿದ್ದೆವು ನಾವು

ಅದಾವ ಭಗವಂತನ ಕರುಣೆಯೋ ಕಾಣೆ
ಮೊರೆ ಆಲಿಸಿದ ದೇವರು ನಿನ್ನಾಸೆಯ ಪೂರೈಸಿದ್ದ
ಗರ್ಭ ಧರಿಸಿದೆ, ತಾಯಿಯಾದೆ
ಮುದ್ದಾದ ಮಗುವೊಂದಕ್ಕೆ ಜನ್ಮ ನೀಡಿದೆ!

ನೋಡ ನೋಡುತ್ತಾ, ಕಾಲ ಕಳೆದಂತೆ
ಕ್ಷಣ ಕೂಡ ಮಗನನ್ನು ಅಗಲಿರದಂತೆ
ಜೀವಕ್ಕೆ ಉಸಿರಂತೆ, ನಯನಕ್ಕೆ ನೋಟದಂತೆ
ಅವನ ಆಟ ಊಟ ಪಾಟಗಳಲಿ ನೀ ಮುಳುಗಿ ಹೋದೆ

ಆದರೇ..... ನಿನ್ನದೇ ಮುದ್ದು ಕಂದಮ್ಮನಿಗೆ
ವರ್ಷಗಳು ಐದು ಕಳೆಯುವಾ ವೇಳೆಗೆ
ತಿರುಗಿ ಬಾರದ ಲೋಕಕ್ಕೆ ನೀ ಹೊರಟುಹೋದೆ
ಯಾರಿಗೂ ಕಾಣದಂತೆ ಕಣ್ಮರೆಯಾದೆ ನಿನಗಿದು ನ್ಯಾಯವೇ?

ಲೋಕ ಜ್ಞಾನ ಅರಿಯದ ಮಗುವನ್ನು
ಅನಾಥನನ್ನಾಗಿ ಮಾಡಿದೆ ನೀನು
ಇದಕೆ ಏಕೆ ಕೊರಗಿದ್ದೆ ಅಂದು ನೀನು
ಮಗುವಾಗಲಿಲ್ಲವಲ್ಲ ಎಂದು

ನನ್ನೆಲ್ಲ ಪ್ರಶ್ನೆಗಳಿಗೆ ನಿನ್ನ ಮಗನ ಭವಿಷ್ಯಕ್ಕೆ
ನೀನೆಲ್ಲಿದ್ದರೂ ಬಂದು ಉತ್ತರ ತಿಳಿಸು
ಇಲ್ಲದಿದ್ದರೆ...... ನಾವಿಬ್ಬರೂ ನಿನ್ನನ್ನು,
ಕ್ಷಮಿಸಲಾರೆವು ಎಂದೆಂದಿಗೂ.........!!!


ನಿನ್ನದೇ ನೆನಪಲ್ಲಿ ದುಃಖಿಯಾಗಿರುವ ನಿನ್ನ ಗೆಳತಿ........!!!!!









Saturday, September 5, 2009

ಅಪಾತ್ರ ದಾನ.....

ಅದೊಂದು ದಿನ ಬೆಳಗ್ಗೆ, ಮನೆಯ ಅಕ್ಕ ಪಕ್ಕದ ಕೆಲವು ಜನರು ಹೋಯ್, ಹೋಯ್ ಎಂದು ಕೂಗುತ್ತಾ ಕೋಲಿನಿಂದ ಗೇಟಿನ ಮೇಲೆ ಕಾಂಪೌಂಡ್ ಮೇಲೆಲ್ಲಾ ಹೊಡೆಯುತ್ತಿದ್ದರು. ಏನದು ಸದ್ದು ಎಂದು ನಾನು ಹೊರಗೆ ಹೋಗಿ ನೋಡಿದರೆ, ಕೋತಿಗಳ ಹಿಂಡೊಂದು (ಗುಂಪು) ಬಂದಿದ್ದವು! ನಾನು ಹೋಗಿ ನೋಡುವಷ್ಟರಲ್ಲಿ, ಹಾಲಿಗೆಂದು ಗೇಟಿಗೆ ಸಿಗಿಸಿ ಇಟ್ಟಿದ್ದ ಬ್ಯಾಗ್ ಅನ್ನು ಕಿತ್ತಾಡಿ ಅದರಲ್ಲಿದ್ದ ಹಾಲಿನ ಪ್ಯಾಕೆಟ್ ಅನ್ನೂ ಸಹ ಕಿತ್ತು ಕೆಳಗೆಲ್ಲಾ ಚೆಲ್ಲಾಡಿ ಮಿಕ್ಕ ಹಾಲನ್ನು ಕುಡಿಯುತ್ತಾ ಕಾಂಪೌಂಡ್ ಮೇಲೆ ಧಡಿ ಕೋತಿಯೊಂದು ಕೂತಿತ್ತು. ನಾನು ಹೊರಗೆ ಬಂದದ್ದು ನೋಡಿ ಎದುರು ಮನೆ ಅಜ್ಜಿ ಒಬ್ಬರು, ಮಹಡಿಯ ಮೇಲಿಂದ, ಅಯ್ಯೋ ಅನ್ಯಾಯಮ ಪಾಲೆಲ್ಲ ಪೋಚ್ಚಿ, ಎಪ್ಪಡಿ ಪನ್ನಿಟ್ಇರುಕ್ಕುದು ಪಾರುಮ್ಮ (ಅನ್ಯಾಯವಾಗಿ ಹಾಲೆಲ್ಲ ಹೋಯಿತು, ಹೇಗೆ ಮಾಡಿದೆ ನೋಡಮ್ಮ) ಎಂದು ಹೇಳಿದರು.

ನಿಜ ಆ ಕೋತಿಯು ಗೇಟಿನ ಒಳ ಭಾಗ, ಹೊರಭಾಗ ಮತ್ತು ರಂಗೋಲಿ ಬಿಡುವ ಜಾಗದಲ್ಲೆಲ್ಲ ಹಾಲನ್ನು ಚೆಲ್ಲಾಡಿತ್ತು. ಅದನ್ನೆಲ್ಲಾ ನೋಡಿದ ನನಗೆ ಯಾಕೋ ಕೋಪ ಬರಲಿಲ್ಲ. ನಾನು ಮನಸ್ಸಿನಲ್ಲೇ, ಹೋಗಲಿ ಬಿಡು ನಮಗೆ ಒಂದು ದಿನ ಹಾಲಿಲ್ಲದಿದ್ದರೆ ಏನಂತೆ, ಒಂದು ಮೂಕ ಪ್ರಾಣಿ ತನ್ನ ಹೊಟ್ಟೆ ತುಂಬಿಸಿ ಕೊಂಡಿತಲ್ಲಾ ಅಂದುಕೊಂಡು ಒಳಗೆ ಬಂದು ಒಂದು ಬಾಳೆಹಣ್ಣನ್ನು ಸಹ ಅದಕ್ಕೆ ತಂದು ಕೊಟ್ಟೆ. ನನಗೆ ಅದರ ಕೈಗೆ ಕೊಡಲು ಭಯ ಎಲ್ಲಿ ಪರಚಿ ಬಿಡುತ್ತೋ ಎಂದು. ಅದಕ್ಕೆ ಬಾಗಿಲ ಹತ್ತಿರ ನಿಂತುಕೊಂಡು ಮೆತ್ತಗೆ ಎಸೆದೆ. ಅದು ಹಣ್ಣನ್ನು ಕ್ಯಾಚ್ ಹಿಡಿದು, ಕತ್ತು ಮುಂದೆ ಮಾಡಿ ನನ್ನನ್ನೇ ನೋಡುತ್ತಾ ಗುರ್ರ್ ಎಂದು ಗುಟುರು ಹಾಕಿತು. ಆಗ ನಾನು ನನ್ನಲ್ಲೇ ಅಂದುಕೊಂಡೆ, ಹಣ್ಣು ತೋರಿಸಿ ಅದಕ್ಕೆ ಕೊಡದೆ ಇದ್ದಿದ್ದರೆ ಅದು ಗುರಾಯಿಸುವುದು ಸರಿ, ಹಣ್ಣು ಕೊಟ್ಟ ಮೇಲೂ ಯಾಕೆ ಗುರ್ರ್ ಎನ್ನುತ್ತಿದೆ ಅಂತ! ಆದರೆ ಅದು ಮಾಡಿದ ರೀತಿ ನೋಡಿ, ನನಗೆ ಪ್ರಾಣಿಗಳ ಭಾಷೆ ತಿಳಿಯದಿದ್ದರೂ, ಅದು ಧನ್ಯವಾದ ಹೇಳಿತು ಎಂದು ಗೊತ್ತಾಯಿತು. ಓಕೆ ಅಂತ ಹೇಳಿ ಅದಕ್ಕೊಂದು ಸ್ಮೈಲ್ ಕೊಟ್ಟು, ಬಾಗಿಲು ಮುಚ್ಚಿ ಒಳಗೆ ಬಂದೆ.

ಕೆಲಸದಿಂದ ಹಿಂದಿರುಗಿ ಬಂದ ನನ್ನವರಿಗೆ ಎಲ್ಲವನ್ನೂ ಹೇಳಿ, ಏನೋ, ಒಂದು ದಿನ ಹೀಗೆ ಮಾಡಿತು ಆದರೆ ಹಾಲಿಡುವುದಕ್ಕೆ ಬೇರೆ ವ್ಯವಸ್ಥೆ ಮಾಡದಿದ್ದರೆ ನಮಗೆ ಹಾಲೇ ಸಿಗುವುದಿಲ್ಲ ಎಂದು ಹೇಳಿದೆ. ಅದಕ್ಕವರು ಆಯಿತು ಬಿಡು, ಸ್ವಲ್ಪ ದಿನ ಬ್ಯಾಗ್, ಬುಟ್ಟಿ ಯಾವುದೂ ಇಡುವುದು ಬೇಡ, ಪೋಸ್ಟ್ ಡಬ್ಬದ ಒಳಗೆ ಹಾಲು ಇಡುವಂತೆ ಹಾಲಿನವನಿಗೆ ಹೇಳುತ್ತೇನೆ ಎಂದರು.

ಇದೆಲ್ಲ ಕೋತಿ ಕಥೆ ನಡೆದದ್ದು ಕಳೆದ ತಿಂಗಳು. ಇತ್ತೀಚಿಗೆ ಏನಾಯಿತು ಗೊತ್ತಾ.....?ಕೆಲವು ದಿನಗಳ ಮಟ್ಟಿಗೆ ನಾವು ಯಾವುದೋ ವ್ರತ ಕೈಗೊಂಡಿದ್ದರಿಂದ, ವ್ರತ ಮುಗಿಯುವ ವರೆಗೂ ಆವತ್ತಿನ ಅಡುಗೆ ಆ ದಿನವೇ ಮುಗಿಸಬೇಕು, ಅಕಸ್ಮಾತ್ ಮಿಕ್ಕಿದರೂ ತಂಗಳು ತಿನ್ನಬಾರದು ಎಂದು ಹಿರಿಯರು ಹೇಳಿದ್ದರು. ಅದರಂತೆಯೇ ನಾನು ಸಾಧ್ಯವಾದಷ್ಟೂ ಅಳತೆಯಾಗಿಯೇ ಅಡುಗೆ ಮಾಡುತ್ತಿದ್ದೆ. ಏಕೆಂದರೆ ದುಬಾರಿಯ ಈ ಕಾಲದಲ್ಲಿ ಪದಾರ್ಥಗಳನ್ನು ವೇಸ್ಟ್ ಮಾಡುವ ಹಾಗಿಲ್ಲವಲ್ಲ.

ಆದರೆ ಆ ದಿನ (sept 02) ನನ್ನ ಗೆಳತಿಯ ಸಾವಿನ ಸುದ್ದಿ ತಿಳಿದ ನನಗೆ, ಆ ದುಃಖದಲ್ಲಿ ಊಟ ಸೇರಿರರಿಲ್ಲ. ಮಾರನೆ ದಿನ ಅದನ್ನು ನಾವು ಉಪಯೋಗಿಸುವ ಹಾಗು ಇರಲಿಲ್ಲ ಮತ್ತು ಅದನ್ನು ಹಾಗೆ ಕಸದಲ್ಲಿ ಚಲ್ಲುವ ಮನಸ್ಸು ಬರಲಿಲ್ಲ. ಹಾಗಾಗಿ ನಾನು ಹೊರಗೆ ಗುಡಿಸಿ ರಂಗೋಲಿ ಹಾಕುತ್ತಿದ್ದಾಗ, ಮುಂದಿನ ರಸ್ತೆಯಲ್ಲಿ ಫುಟ್ಪಾತ್ ಮೇಲೆ ಪ್ಲಾಸ್ಟಿಕ್ ಸಾಮಾನುಗಳನ್ನು ಮಾರುವ ಒಬ್ಬಾಕೆ, (ಅವಳು ನಮ್ಮ ಅಕ್ಕಪಕ್ಕದ ಮನೆಗಳಲ್ಲೂ ಕೆಲಸ ಮಾಡಲು ಬರುತ್ತಾಳೆ, ಅಲ್ಲದೆ ನಾನು ತರಕಾರಿ, ಮತ್ತು ದಿನಸಿ ಸಾಮಾನುಗಳನ್ನು ತರಲು ಆಗಾಗ ಅಂಗಡಿಗೆ ಹೋದಾಗ ನನ್ನನ್ನು ಕಂಡಾಗ ಸ್ಮೈಲ್ ಕೊಡುತ್ತಿದ್ದಳು, ಒಮ್ಮೊಮ್ಮೆ ಮಾತಾಡಿಸುತ್ತಲೂ ಇದ್ದಳು. ಅವಳಿಗೆ ಮೂರು ಜನ ಮಕ್ಕಳು.) ಅವಳನ್ನು ಕಂಡಾಗ, ಪೊಂಗಲ್ ಇದೆ ಕೊಡಲಾ, ತಗೋತೀಯಾ....? ಎಂದು ಕೇಳಿದೆ. ಅದಕ್ಕವಳು ತಂಗಳ ಅಕ್ಕ ಎಂದು ಕೇಳಿದಳು. ಹ್ಞೂ.... ಹೌದು ಚೆನ್ನಾಗೇ ಇದೆ, ರಾತ್ರಿನೂ ಬಿಸಿ ಮಾಡಿದ್ದೀನಿ ಬೇಕಿದ್ದರೆ ಈಗಲೂ ಬಿಸಿ ಮಾಡಿ ಕೊಡುತ್ತೀನಿ ಎಂದು ಹೇಳಿದೆ. ಆಗ ಅವಳೊಂದಿಗೆ ಬಂದಿದ್ದ ಒಬ್ಬ ಮಗನಿಗೆ, ಆಂಟಿ ಅನ್ನ ಕೊಡ್ತಾರಂತೆ ಇಸ್ಕೊಂಡು ಬಾರೋ ಅಂತ ಹೇಳಿ ಅವನನ್ನು ಬಿಟ್ಟು ಹೋದಳು. ಹೇಳಿದ ಪ್ರಕಾರ ನಾನು ಬಿಸಿ ಮಾಡಿ ಕೆಲವು ನಿಮಿಷಗಳಲ್ಲಿಯೇ ಆ ಹುಡುಗನ ಕೈಗೆ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಪೊಂಗಲ್ ಅನ್ನು ತುಂಬಿಸಿ ಕೊಟ್ಟೆ.

ಅದಾದ ನಂತರ ಆ ದಿನವೆಲ್ಲ ನಾನು ಹೊರಗೆಲ್ಲೂ ಹೋಗಲೇ ಇಲ್ಲ. ಆ ದಿನ ಮಾಡಿದ್ದ ಬಿಸಿಬೇಳೆ ಬಾತ್ ಕೂಡ ಸ್ವಲ್ಪ ಮಿಕ್ಕಿ ಹೋಯಿತು. (ಏನು ಮಾಡುವುದು ಅಡುಗೆ ಎಂದರೆ ಹಾಗೆ ಅಲ್ಲವೇ ಎಷ್ಟು ಅಳತೆಯಾಗಿ ಮಾಡಲು ಪ್ರಯತ್ನಿಸಿದರೂ ಸ್ವಲ್ಪವಾದರೂ ಹೆಚ್ಚು ಅಥವಾ ಕಡಿಮೆ ಆಗೇ ಆಗುತ್ತದೆ.) ಅದನ್ನೂ ಅದೇ ರೀತಿ ಆ ಮಕ್ಕಳಿಗೆ ಕೊಡೋಣ ಎಂದುಕೊಂಡೆ, ಆದರೆ ಆದಿನ ಅವಳಾಗಲಿ, ಮಕ್ಕಳಾಗಲಿ ಕಾಣಿಸಲಿಲ್ಲ. ಸರಿ ಅಲ್ಲೇ ಮುಂದಿನ ರಸ್ತೆಯಲ್ಲೇ ಇರುತ್ತಾಳಲ್ಲ, ಅಂಗಡಿಗೆ ಹೋದಾಗ ನಾನೇ ತೆಗೆದುಕೊಂಡು ಹೋಗಿ ಕೊಡೋಣ ಎಂದುಕೊಂಡು ಸುಮ್ಮನಾದೆ. ಹಾಗೆ ಸ್ವಲ್ಪ ಹೊತ್ತಿನ ನಂತರ ಅಂಗಡಿಗೂ ಹೋದೆ ಆದರೆ ಅನ್ನವನ್ನು ತೆಗೆದುಕೊಂಡು ಹೋಗಲು ಮರೆತೇ.

ಅರೆರೆ.... ತರಕಾರಿ ಕೊಂಡು ವಾಪಸ್ ಮನೆಗೆ ಬರುವಾಗ ನಾನಲ್ಲಿ ಕಂಡ ದೃಷ್ಯವೇನು?ಅಲ್ಲಿ ಖಾಲಿ ಇದ್ದ ಜಾಗದ ಫೆನ್ಸಿಂಗ್ ಹತ್ತಿರ, ನಾನು ನೆನ್ನೆ ಕೊಟ್ಟಿದ್ದ ಆ ಪೊಂಗಲ್ ಡಬ್ಬಿ ಅಲ್ಲಿ ಬಿದ್ದಿತ್ತು ಅಷ್ಟೇ ಅಲ್ಲ ಅದರಲ್ಲಿದ್ದ ಪೊಂಗಲ್ ಎಲ್ಲವೂ ಅಲ್ಲಿನ ಮಣ್ಣಲ್ಲಿ ಬೆರೆತು ಹೋಗಿತ್ತು! ಅದನ್ನು ಕಂಡು ಬೇಸರದಿಂದ ಮನೆಗೆ ಬಂದು, ಒಂದು ಕ್ಷಣ ಯೋಚಿಸಿದೆ. ನಾವು ಸುಮ್ಮನೆ ತಪ್ಪು ತಿಳಿದುಕೊಳ್ಳ ಬಾರದು. ಆ ಡಬ್ಬಿ ಅಕಸ್ಮಾತ್ ಅವನ ಕೈಯಿಂದ ಜಾರಿ ಬಿದ್ದಿರಬಹುದೇ ಎಂದು. ಆದರೆ ಆ ರೀತಿ ಆಗಿರಲು ಸಾಧ್ಯವಿಲ್ಲ ಏಕೆಂದರೆ ಅಲ್ಲಿಂದ ಐದಾರು ಹೆಜ್ಜೆ ಮುಂದೆ ಹೋದರೆ ಅಲ್ಲಿ ಮರದ ಪಕ್ಕದಲ್ಲಿ ಕಸ ಹಾಕುವ ಜಾಗವಿದೆ ಅಲ್ಲೇ ಬಿದ್ದಿತ್ತಲ್ಲಾ ಆ ಡಬ್ಬಿ.

ಅವಳು ತನಗೆ ಬೇಡ ಎಂದು ಹೇಳಿದ್ದರೂ, ಅದೇ ರಸ್ತೆಯಲ್ಲಿ ಕಟ್ಟಡದ ಕೆಲಸ ಮಾಡುವವರ ಮಕ್ಕಳಿದ್ದರು ಅವರಿಗಾದರೂ ಕೊಡುತ್ತಿದ್ದೇನಲ್ಲಾ, ಅಕ್ಕಿ, ಬೇಳೆ ಬೆಲೆಗಳು ದುಬಾರಿಯಾಗಿರುವ ಈ ಕಾಲದಲ್ಲಿ ಹೀಗೆ ಮಾಡಿದಳಲ್ಲ ಎಂದು ಬೇಜಾರಾಯಿತು. ಆಗಲೇ ನನಗೆ ಹಿಂದಿನ ಕೋತಿಯ ಪ್ರಸಂಗ ನೆನಪಾಯಿತು ಮತ್ತು ಅಣ್ಣಾವ್ರ ಹಾಡೊಂದು ನೆನಪಿಗೆ ಬಂದಿತು......ಪ್ರಾಣಿಗಳೇ ಗುಣದಲಿ ಮೇಲು........., ಮಾನವನದಕಿಂತ ಕೀಳು......!


ಅಂದಿನಿಂದಾ ಇಂದಿನವರೆಗೂ ಅವಳಾಗಲಿ ಅವಳ ಮಕ್ಕಳಾಗಲಿ ನನಗೆ ಕಣ್ಣಿಗೆ ಕಾಣಿಸಲೇ ಇಲ್ಲ.....!!

Friday, September 4, 2009

ಪುನರಾಗಮನ

ಹಲೋ ಸ್ನೇಹಿತರೇ, ಬಹಳ ದಿನಗಳ ನಂತರ ನನ್ನ ಬ್ಲಾಗಿಗೆ ಮತ್ತು ನಮ್ಮ ಬ್ಲಾಗ್ ಲೋಕಕ್ಕೆ ಹಿಂದಿರುಗಿದ್ದೇನೆ!!! ಇಷ್ಟು ದಿನ ಎಲ್ಲಿ ಕಳೆದು ಹೋಗಿದ್ದೆ ಎಂದು ಕೇಳುತ್ತಿರುವಿರಾ? ಹೀಗೆ ಹಲವಾರು ವಿಧಗಳಲ್ಲಿ ವ್ಯಸ್ತವಾಗಿ ಹೋಗಿದ್ದೆ ಅದಕ್ಕೆ ಇಷ್ಟು ದಿನ ಯಾವುದೇ ಲೇಖನಗಳನ್ನು ಬರೆಯಲಾಗಿರಲಿಲ್ಲ. ಅದಕ್ಕಾಗಿ ವಿಷಾದವಿದೆ. ನಿಮ್ಮೆಲ್ಲರನ್ನು ಮತ್ತು ನಿಮ್ಮ ಲೇಖನಗಳನ್ನು ಮಿಸ್ ಮಾಡಿಕೊಂಡೆ, ಆದರೆ ಸಮಯ ಸಿಕ್ಕಾಗ ಪ್ರತಿಯೊಂದು ಲೇಖನವನ್ನು ತಪ್ಪದೆ ಓದುತ್ತೇನೆ! (ನೀವು ಯಾರೂ ನನ್ನ ಮರೆತಿಲ್ಲ ತಾನೆ?)

ಸ್ನೇಹಿತರೇ, ನಾವು ಎಲ್ಲಿದ್ದರೂ, ಹೇಗಿದ್ದರೂ ಜೀವನ ತನ್ನ ಪಾಡಿಗೆ ತಾನು ಮುನ್ನಡೆಯುತ್ತಿರುತ್ತದೆ! ಈ ಸತ್ಯ ಎಲ್ಲರಿಗೂ ತಿಳಿದಿರುವಂತಹುದು. ಈ ಜೀವನ ಜಂಜಾಟದಲ್ಲಿ, ಪ್ರತಿಯೊಬ್ಬ ಮನುಷ್ಯನೂ ಎಲ್ಲಾ ತರಹದ ಅನುಭೂತಿಯನ್ನು ಅನುಭವಿಸಬೇಕಾಗುತ್ತದೆ. ನೋವು, ನಲಿವು, ಸುಖ, ದುಃಖ, ಸೋಲು, ಗೆಲುವು, ಸಂತೋಷ, ವ್ಯಥೆ.... ಹೀಗೆ ಇನ್ನೂ ಮುಂತಾದುವು. ಇವೆಲ್ಲಾ ಎಲ್ಲರ ಬದುಕಿನಲ್ಲೂ ಆಗಾಗ ಬಂದು ಹೋಗುವಂತಾ, ಅನುಭವಗಳು.


ಇಷ್ಟು ದಿನಗಳ ನನ್ನ ಗೈರು ಹಾಜರಿಯಲ್ಲಿ ನಾನು ಇವೆಲ್ಲವನ್ನೂ ಅನುಭವಿಸಿದ್ದೇನೆ. ಅಂದರೆ ಇವೆಲ್ಲ ನಮ್ಮ ಜೀವನದ ಒಂದು ಭಾಗ ನಿಜ, ಆದರೆ ಇವೆಲ್ಲವನ್ನೂ, ಒಟ್ಟೊಟ್ಟಿಗೆ ಅಥವಾ ಒಂದರ ನಂತರ ಮತ್ತೊಂದು ಎನ್ನುವಂತೆ ಬೆಂಬಿಡದ ಭೂತವನ್ನು ಸಂಭಾಳಿಸಿದಂತೆ ಈ ಎಲ್ಲಾ ಸಂಧರ್ಭಗಳನ್ನೂ ಒಂದು ಸೀಸನ್ ಎಂಬಂತೆ ಒಮ್ಮೆಲೇ ಎಲ್ಲ ತರಹದ ಅನುಭೂತಿಯನ್ನು ಪಡೆದುಕೊಂಡೆ.

ಸಮಾರಂಭ, ಪ್ರವಾಸ, ಕೆಲಸ, ಓಡಾಟ, ಆತ್ಮೀಯರೊಂದಿಗಿನ ಒಡನಾಟ, ಇವೆಲ್ಲವುಗಳ ಜೊತೆ ಜೊತೆಯಲ್ಲೇ, ಇತ್ತೀಚಿಗೆ ನನ್ನ ಆತ್ಮೀಯ ಗೆಳತಿಯೊಬ್ಬಳ ಅಗಲಿಕೆಯ ನೋವು, ದುಃಖ ಇವೆ ಮುಂತಾದುವು. ಈ ಎಲ್ಲ ನೆನಪುಗಳನ್ನು ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, ಜೊತೆಗೆ ಕೆಲವು ಅಪೂರ್ಣ ಲೇಖನಗಳನ್ನು ಪೂರ್ತಿಗೊಳಿಸಬೇಕಿದೆ.

Friday, July 24, 2009

ಮದುವೆ ಕರೆಯೋಲೆ.....!

ಇದು ನನ್ನ ತುಂಟ ಮನಸಿನ, ಕಾಲ್ಪನಿಕ ಸನ್ನಿವೇಶ ಅಷ್ಟೇ. ನಿಮಗೆ ಇಷ್ಟವಾದಲ್ಲಿ ಮೆಚ್ಚಿ, ಇಲ್ಲವಾದರೂ ತಿಳಿಸಿ ಬಿಡಿ,ಹಾಗೆ ಸುಮ್ಮನೆ .......!

ಆಷಾಡ ಕಳೆದು ಶ್ರಾವಣ ಮಾಸ ಬಂದಿತು! ಇನ್ನೇನು ಮದುವೆ ಕಾಲ, ಸಂಭ್ರಮ ಮತ್ತು ಸಡಗರ, ಜೊತೆಗೆ ಸಾಲಾಗಿ ಹಬ್ಬಗಳು ಬೇರೆ ಬರುತ್ತವೆ. ಯಾರ ಮದುವೆ ಇರಬಹುದಪ್ಪಾ, ಆಹ್ವಾನ ಪತ್ರಿಕೆ ಕಳಿಸುತ್ತಿದ್ದಾರೆ ಅಂದುಕೊಂಡಿರಾ? ಖಂಡಿತ ಮದುವೆ ನನ್ನದಂತೂ ಅಲ್ಲ!!! ಇನ್ಯಾರದು ಅಂತ ತಿಳಿದು ಕೊಳ್ಳುವ ತವಕಾನಾ? ಯಾಕಷ್ಟು ಅವಸರ ನಿಧಾನವಾಗಿ, ನೆಮ್ಮದಿಯಾಗಿ ಲಗ್ನಪತ್ರಿಕೆ ಓದಿ ಮತ್ತು ನೀವೆಲ್ಲರೂ ಈ ಸಂತೋಷ ಸಮಾರಂಭದಲ್ಲಿ ಭಾಗಿಯಾಗಿ.

ಅಂದ ಹಾಗೆ ಸುಮ್ಮನೆ ವಧು ವರರ ಹೆಸರು ಮತ್ತು ಮದುವೆ ಸ್ಥಳ ಮಾತ್ರ ಓದಿ ಸುಮ್ಮನಾಗಬೇಡಿ! ಒಂದು ಅಕ್ಷರವೂ ಬಿಡದೆ ಪೂರ್ತಿ ಓದಿಬಿಡಿ ಆಗ ನಿಮಗೆ ಅನಿಸಿದ್ದು ನನಗೆ ತಿಳಿಸಿ .

ಯಾವುದೇ ಸಮಾರಂಭವಿರಲಿ ಅಲ್ಲಿ ಸಿಹಿ ತಿನಿಸು ಇಲ್ಲದಿದ್ದರೆ ಹೇಗೆ? ಅದು ಅಪೂರ್ಣ ಆಗುವುದಿಲ್ಲವೇ?
ಹೌದು, ಯಾವುದೇ ಆಚರಣೆ ಇರಲಿ ಅಲ್ಲಿ ಸಿಹಿ ತಿಂಡಿ ಇರಲೇ ಬೇಕು. ಆದರೆ ಈ ಸಿಹಿಗಳೇ ಮದುವೆ ಸಂಭ್ರಮ ನಡೆಸಿಕೊಂಡರೆ ಹೇಗಿರುತ್ತೆ......?!

ಮುಂದೆ ಓದಿ......



ಶುಭ ವಿವಾಹ


ಶ್ರೀ ಕೊಬ್ಬರಿ ಮಿಠಾಯಿ ಸ್ವಾಮಿ ಪ್ರಸನ್ನ!!!


ಸಕ್ಕರೆ ಜಿಲ್ಲೆಯ, ಗೋಡಂಬಿ ತಾಲೂಕು, ದ್ರಾಕ್ಷಿ ಹೋಬಳಿ, ಕಡ್ಲೆ ಹಿಟ್ಟು ಗ್ರಾಮದಲ್ಲಿ ವಾಸವಾಗಿರುವ
ಶ್ರೀಮತಿ ಮತ್ತು ಶ್ರೀ ಬೂಂದಿ ರಾವ್
ಮತ್ತು
ಮೈದಾ ಹಿಟ್ಟು ಜಿಲ್ಲೆಯ, ಬಾದಾಮಿ ತಾಲೂಕು, ಕ್ಷೀರ ಹೋಬಳಿ, ರವೆ ಗ್ರಾಮದಲ್ಲಿ ವಾಸವಾಗಿರುವ
ಶ್ರೀಮತಿ ಮತ್ತು ಶ್ರೀ ಚಿರೋಟಿ ರಾವ್

ಸ್ವಸ್ತಿಶ್ರೀ ಕೇಸರಿ ಬಾತ್ ನಾಮ ಸಂವತ್ಸರ ದಿನಾಂಕ 46 / 83 / 2896 ರಂದು
ಮಧ್ಯರಾತ್ರಿ 33 ಘಂಟೆ 30 ನಿಮಿಷದಲ್ಲಿ "ಕ್ಯಾರೆಟ್ ಹಲ್ವ ಲಗ್ನದಲ್ಲಿ ನಡೆಯುವ "

ಚಿ ಸೌ ಜಿಲೇಬಿ ದೇವಿ
(ಶ್ರೀಮತಿ ಶ್ರೀ ಬೂಂದಿ ರಾವ್ ಅವರ ಜ್ಯೇಷ್ಠ ಪುತ್ರಿ)
ಮತ್ತು
ಚಿ ರಾ ಜಾಮೂನ್ ರಾವ್
(ಶ್ರೀಮತಿ ಶ್ರೀ ಚಿರೋಟಿ ರಾವ್ ಅವರ ಜ್ಯೇಷ್ಠ ಪುತ್ರ)

ಇವರ ವಿವಾಹ ಮಹೋತ್ಸವವನ್ನು, ಮೈಸೂರ್ ಪಾಕ ನಗರದಲ್ಲಿ ಇರುವ ಲಾಡು ಬಡಾವಣೆಯ ಧೂದ್ ಪೇಢ ಛತ್ರದಲ್ಲಿ ನಡೆಯುವಂತೆ, ಬಾಧೂಷರವರು ಮತ್ತು ಚಂಪಾಕಲಿಯವರು ಜೊತೆಗೆ ಇನ್ನೂ ಅನೇಕ ಸಿಹಿಗಳು ನಿಶ್ಚಯಿಸಿರುವುದರಿಂದ, ತಾವುಗಳು ತಮ್ಮ ಪರಿವಾರ ಸಮೇತ ಮದುವೇ ಛತ್ರಕ್ಕೆ ಬಂದು ಊಟಮಾಡಿ ಕೈ ತೊಳೆದುಕೊಂಡು, ವಧು ವರರನ್ನು ಆಶೀರ್ವದಿಸಬೇಕೆಂದು ಕೋರುವವರು, ಶ್ರೀ ಬೂಂದಿ ರಾವ್ ಮತ್ತು ಶ್ರೀ ಚಿರೋಟಿ ರಾವ್

ತಮ್ಮ ಸುಖ ಆಗಮನವನ್ನು ಬಯಸುವವರು:

ಬರ್ಫಿ, ಹಾಲುಖೋವ ಮತ್ತು ಮುಂತಾದ ಸಿಹಿ ಮಿತ್ರರು.......!!!!!


ಮುಖ್ಯ ಸೂಚನೆ:ತಮ್ಮ ಉಡುಗೊರೆಗಳನ್ನು ಪಾಯಸ ಮತ್ತು ಒಬ್ಬಟ್ಟು ಇವರುಗಳ ಕೈಗೆ ಕೊಡಬೇಕಾಗಿ, ತುಪ್ಪದ ವಿನಂತಿ!



ವಿವರಗಳಿಗೆ ಇಲ್ಲಿ ಸಂಪರ್ಕಿಸಿ :
ರಸಗುಲ್ಲ ಪ್ರಿಂಟರ್ಸ್, ಜಹಾಂಗೀರ್ ಪುರ!

Saturday, July 4, 2009

ಹೆಣ್ಣು ಒಲಿದರೆ........!

ಒಬ್ಬ ಹಳ್ಳಿಯವನು, ಹೊಸದಾಗಿ ಮದುವೇ ಆಗಿರುತ್ತಾನೆ! ಮೂರು ದಿನಗಳು ಮಾವನ ಮನೆಯಲ್ಲಿ ಕಳೆದ ನಂತರ ಹೆಂಡತಿಯೊಂದಿಗೆ ತನ್ನ ಮನೆಗೆ ಹೊರಡಲು ಸಿದ್ದವಾಗಿರುತ್ತಾನೆ. ಹೊರಡುವ ಮುಂಚೆ ಮಾವ ಈ ಅಳಿಯನನ್ನು ಕರೆದು, ತನ್ನ ಮಗಳ ಬಗ್ಗೆ ಕೆಲವು ಲೋಕಾರೂಡಿಯ ಮಾತುಗಳನ್ನಾಡಿ ಕೊನೆಯಲ್ಲಿ ಒಂದು ಮಾತು ಹೇಳುತ್ತಾರೆ! ಅದೇನೆಂದರೆ, ನೋಡಿ ಅಳಿಯಂದ್ರೆ, ಹೆಣ್ಣು ಚಂಚಲೆ ಮತ್ತು ವಿಚಿತ್ರ ಸ್ವಭಾವದವಳಾಗಿರುತ್ತಾಳೆ, ಹೆಣ್ಣಿನ ಮನಸ್ಸು ಅರಿಯುವುದು ಅಷ್ಟು ಸುಲಭವಲ್ಲ. ಅದಕ್ಕೆ ಹೆಣ್ಣಿನ ಬಗ್ಗೆ ನಮ್ಮ ಹಿರಿಯರು ಒಂದು ಮಾತು ಹೇಳುತ್ತಿದ್ದರು "ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ" ಎಂದು!! ಈ ಮಾತನ್ನು ನಾನು ನಿಮ್ಮ ಕಿವಿಗೆ ಹಾಕಿದ್ದೇನೆ, ಈ ವಿಷಯವನ್ನು ಮನದಲ್ಲಿ ಇಟ್ಟುಕೊಂಡು, ನನ್ನ ಮಗಳ ಮನಸ್ಸನ್ನು ಅರ್ಥಮಾಡಿಕೊಂಡು ಅವಳೊಂದಿಗೆ ಹೊಂದಿಕೊಂಡು ಅನ್ಯೋನ್ಯ ದಾಂಪತ್ಯ ನಡೆಸಿ. ಮುಂದಿನ ನಿಮ್ಮ ಜೀವನ ಶುಭಾಮಯವಾಗಿರಲಿ ಎಂದು ಹಾರೈಸುತ್ತಾ ಅಳಿಯ ಮತ್ತು ಮಗಳನ್ನು ಬೀಳ್ಕೊಡುತ್ತಾರೆ!


ಮದುವೆಯಾಗಿ, ಕೆಲವು ತಿಂಗಳು ಕಳೆಯಿತು. ಅಷ್ಟರಲ್ಲಿ ಒಂದು ದೊಡ್ಡ ಹಬ್ಬ ಬರುತ್ತಿತ್ತು. ಆ ಹಬ್ಬಕ್ಕೆ ಅಳಿಯ ಮತ್ತು ಮಗಳನ್ನು ಅಹ್ವಾನಿಸಿದ್ದೂ ಆಯಿತು. ಹಬ್ಬ ಹತ್ತಿರ ಬರುತ್ತಿದ್ದಂತೆ ಅಳಿಯಂದ್ರು ಹೊರಟರು ಮಾವನ ಮನೆಗೆ! ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಮಾವನಿಗೆ ಬಂಡಿ (ಎತ್ತಿನ ಗಾಡಿ) ಸದ್ದು ಕೇಳಿ ಸಂಭ್ರಮದಿಂದ, ಮನೆಯವರನ್ನೆಲ್ಲಾ ಕೂಗುತ್ತಾ ಅವರನ್ನು ಬರಮಾಡಿಕೊಳ್ಳಲು ಹೊರಗೆ ಬರುತ್ತಾರೆ. ಅಷ್ಟರಲ್ಲಿ ಗಾಡಿ ಇಳಿದು ಮನೆ ಮುಂದೆ ನಿಂತಿದ್ದ ಅಳಿಯನಿಗೆ ಕೈ ಕಾಲು ತೊಳೆಯಲು ನೀರು ಕೊಡುತ್ತಾ, ಮಾವ ತನ್ನ ಮಗಳ ಬಗ್ಗೆ ವಿಚಾರಿಸುತ್ತಾರೆ! ಎಲ್ಲಿ ಅಳಿಯಂದ್ರೆ ನನ್ನ ಮಗಳು? ನೀವು ಅವಳನ್ನು ನಿಮ್ಮ ಜೊತೆಯಲ್ಲಿ ಕರೆದುಕೊಂಡು ಬರಲಿಲ್ವಾ ಅಂತ ಕೇಳುತ್ತಾರೆ!!

ಅದಕ್ಕೆ ಅಳಿಯಂದ್ರು ಹೇಳುತ್ತಾರೆ, ಅಯ್ಯೋ ಅವಳು ನನ್ನ ಜೊತೆಗೆ ಹೊರಟಳು ಮಾವ. ಆದರೆ, ಮತ್ತೆ...... ಮತ್ತೆ......., ಆ ದಿನ ನೀವೇ ಹೇಳಿದ್ರಲ್ವ 'ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ' ಅಂತ! ಅದಕ್ಕೆ...... ಅವಳು ಅವಾಗವಾಗ ತುಂಬಾ ಮುನಿಸಿಕೊಳ್ಳುತ್ತಿದ್ದಳು ಮಾವ, ಆದ್ದರಿಂದ ಬರುವಾಗ ದಾರಿಯಲ್ಲಿ ಅವಳನ್ನು ಪಕ್ಕದ ಹಳ್ಳಿಯವನಿಗೆ 'ಮಾರಿ' ಬಿಟ್ಟು ಬಂದೆ!!!!! ಅಂತ !*!*?*!*! ಈ ಮಾತನ್ನು ಕೇಳಿದ ಮಾವನಿಗೆ ಬೆಸ್ತೋ ಬೇಸ್ತು!!!


ಮೊನ್ನೆ ಹೀಗೆ ನನ್ನ ಹಳೆಯ ಪುಸ್ತಕಗಳನ್ನು ಜಾಲಾಡುವಾಗ, ಅದರಲ್ಲಿ ನಾನು ಸಂಗ್ರಹಿಸಿದ್ದ ಈ ಪುಟ್ಟ ಲೇಖನ ದೊರೆಯಿತು. ಅದನ್ನು ನನ್ನ ಬ್ಲಾಗ್ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದು ಈ ವಾರ ಅದನ್ನೇ ಬರೆದಿದ್ದೇನೆ.
ಪ್ರಿಯ ಸ್ನೇಹಿತರೆ, ಬಹುಷಃ ನಿಮಗೆಲ್ಲರಿಗೂ ಈ ಜೋಕು ಗೊತ್ತಿರಬಹುದು ಎಂದುಕೊಳ್ಳುತ್ತೇನೆ. ನಿಮ್ಮ ಅನಿಸಿಕೆ ತಿಳಿಸಿ.

Thursday, June 25, 2009

ಹೆಮ್ಮೆಯ ವಿಷಯ.......!

ನನ್ನ ಪತಿಯ ಮೊಬೈಲ್ ಗೆ ಅವರ ಪರಮಾಪ್ತ ಸ್ನೇಹಿತರೊಬ್ಬರು ಈ ದಿನ ಒಂದು ಮೆಸೇಜ್ ಕಳುಹಿಸಿದ್ದರು. ಅದರಲ್ಲಿದ್ದ ವಿಷಯ ಹೀಗಿದೆ ,

Good News:-

"OUR NATIONAL ANTHEM (JANAGANAMANA)" has selected as

"WORLD'S BEST NATIONAL ANTHEM" by "UNESCO"

"PROUD TO BE AN INDIAN"

"TELL TO ALL OUR INDIAN"


ಅಲ್ಲವೇ ಹೆಮ್ಮೆಯ ವಿಷಯ! ರಾಷ್ಟ್ರ ಗೀತೆಯನ್ನು ರಚಿಸಿದ "ರವಿಂದ್ರನಾಥ್ ಠಾಗೋರ್" ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು!!!

ನಮ್ಮ ರಾಷ್ಟ್ರ ಗೀತೆ ಮತ್ತು ರಚನೆಕಾರರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ en.wikipedia.org/wiki/jana_gana_mana ಇಲ್ಲಿ ಭೇಟಿ ನೀಡಿ.

Sunday, June 21, 2009

ಹೆಸರಿಗೂ ಬಂತು ಹಿಂಜರಿತ.....! (ರಿಸೆಶನ್)



ಇದೆ ತಿಂಗಳ 17 ನೆ ತಾರೀಖಿನಂದು ಕೊಲ್ಸಪಾರ್ಕ್ ಹತ್ತಿರದಲ್ಲಿರುವ 'ಸೆಂಟ್ ಜಾನ್ ಕಮ್ಯುನಿಟಿ' ಹಾಲ್ ನಲ್ಲಿ ಒಂದು ಮದುವೇ ನಡೆಯಿತು. ಇದೇನಿದು ಬೆಂಗಳೂರಿನಂತಾ ಮಹಾ ನಗರದಲ್ಲಿ ದಿನಕ್ಕೆ ಹತ್ತಾರು ಮದುವೆಗಳು ನಡೆಯುತ್ತವೆ ಇದರಲ್ಲಿ ವಿಶೇಷವೇನು ಅಂತೀರಾ? ಸ್ವಲ್ಪ ಇರಿ, ಅಲ್ಲೇ ಇರೋದು ವಿಷಯ. ಅದನ್ನು ವಿವರಿಸುತ್ತೀನಿ, ಮುಂದೆ ಓದಿ!




ಆ ದಿನ ಬುಧವಾರ ರಾತ್ರಿ ನಾನು ನಮ್ಮವರು ಮನೆಗೆ ಹಿಂದಿರುಗುವಾಗ, ಆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದೆವು. ಹಿಂಬದಿಯ ಸೀಟ್ ನಲ್ಲಿ, ಒಂದೇ ಸೈಡ್ ನಲ್ಲಿ ಕುಳಿತಿದ್ದರಿಂದ (ಹಿಂದೆ ಕುಳಿತುಕೊಳ್ಳುವಾಗ ಜಾಸ್ತಿ ಹೀಗೆ ಕೂರುವುದು) ನನಗೆ ಆ ಹೆಸರುಗಳು ಸ್ಪಷ್ಟವಾಗಿ ಕಂಡವು! ಅಂದರೆ ಹೊರಗೆ ಆರ್ಚ್ (ಕಮಾನು) ನಲ್ಲಿ ಬರೆದಿರುತ್ತಾರಲ್ಲ ಆ ಬೋರ್ಡ್ ನಲ್ಲಿ ಓದಿದ್ದು. ಅದು ಹೂವಿನ ಕಮಾನಾಗಿರಲಿಲ್ಲ ಬದಲಿಗೆ ಬೆಂಡ್ ನಲ್ಲಿ (ಥರ್ಮೊಕೋಲ್) ಬರೆದಿದ್ದಂತಾ ಅಕ್ಷರಗಳವು!! (ಕ್ರೈಸ್ತರಲ್ಲವೇ ಅದಕ್ಕೆ)


ಅದನ್ನು ಓದಿ ನನಗೆ ತುಂಬಾ ಆಶ್ಚರ್ಯವಾಯಿತು, ಹೀಗೂ ಉಂಟೆ ಎಂದು!!!




ನಾನು ಈ ವಿಚಿತ್ರವನ್ನು ನನ್ನ ಬ್ಲಾಗ್ ನಲ್ಲಿ ಫೋಟೋ ಸಮೇತ ಹಾಕೋಣ ಎಂದು, ಮಾರನೆ ದಿನ ಬೆಳಗ್ಗೆನೇ ಕ್ಯಾಮೆರಾ ಜೊತೆ ಆ ಕಮ್ಯುನಿಟಿ ಹಾಲ್ ಹತ್ತಿರ ಹೋದೆ. ಅಲ್ಲಿ ಹೋಗಿ ನೋಡಿದರೆ ಆ ಆರ್ಚ್ ಅನ್ನು ತೆಗೆದುಬಿಟ್ಟಿದ್ದರು. ಅಲ್ಲಿ ಏನು ನಡೆದೇ ಇಲ್ಲವೇನೋ ಎನ್ನುವಂತೆ ಎಲ್ಲ ಸ್ವಚ್ಛ ಮಾಡಿಬಿಟ್ಟಿದ್ದರು! ನಾನು ನಿರಾಶೆಯಿಂದ ಹಿಂದಿರುಗಿ ಬಂದೆ. ಈಗ ಫೋಟೋ ಇಲ್ಲದೆ ಬರಿ ಲೇಖನ ಅಷ್ಟೇ ಬರೆದಿದ್ದೀನಿ.


ಇಷ್ಟೆಲ್ಲಾ ಪುರಾಣ ಹೇಳಿ ಇನ್ನೂ ಹೆಸರುಗಳನ್ನೇ ಹೇಳದೆ ಸತಾಯಿಸುತ್ತಿದ್ದೀನಿ ಅಂದುಕೊಳ್ಳುತ್ತಿದ್ದೀರಾ? ಹೇಳ್ತೀನಿ ಹೇಳ್ತೀನಿ! ಅದೇನೆಂದರೆ M WEDS S ಅಷ್ಟೇ !!! ಹೀಗಿದ್ದರೆ ಇದರಲ್ಲಿ ವಧುವಿನ ಹೆಸರ್ಯಾವುದು, ವರನ ಹೆಸರು ಯಾವುದು ಎಂದು ತಿಳಿಯುವುದಾದರೂ ಹೇಗೆ? ಇಲ್ಲಿ ಬಹುಶಃ S ಬದಲು F ಇದ್ದಿದ್ದರೆ, MALE WEDS FEMALE ಅಂತ ಅಂದುಕೊಳಬಹುದಾಗಿತ್ತು ಅಲ್ಲವಾ? !



Friday, June 5, 2009

ಇದೇನು ಗತಿ ಬಂತು.......!?!?



ಸಿಹಿ ತಿಂಡಿಗಳೆಂದರೆ ಇಷ್ಟ ಪಡುವವರು, ಮನೆಯಲ್ಲೇ ತಯಾರಿಸಿದ ಸಿಹಿಯಾದರೆ ಏನೂ ಯೋಚನೆ ಇಲ್ಲ, ಆದರೆ ಹೊರಗಿನ ಸಿಹಿ ತಿಂಡಿ ತಿನ್ನುವಾಗ ಅದರಲ್ಲೂ ನನ್ನ ಹಾಗೆ ಅಪ್ಪಟ ಸಸ್ಯಹಾರಿಯಾಗಿದ್ದರೆ ಇನ್ನು ಮುಂದೆ ಯೋಚಿಸಿ ತಿನ್ನಿ!!!

ಬರಿ ಸಿಹಿ ತಿನಿಸಷ್ಟೇ ಅಲ್ಲ, ಹಣ್ಣುಗಳು, ಔಷಧಿ, ಕೆಲವು ಕಡೆ ಕೊಡುವ ಪ್ರಸಾದಗಳು ಇನ್ನೂ ಮುಂತಾದುವು ಬೆಳ್ಳಿಯ ಹಾಳೆಯಲ್ಲಿ (silver foil) ಸುತ್ತಿದ್ದರೆ ಅವುಗಳನ್ನು ಉಪಯೋಗಿಸುವ ಮೊದಲು ಸ್ವಲ್ಪ ಆಲೋಚಿಸಿ.!.!

ಸಸ್ಯಹಾರ, ಮಾಂಸಾಹಾರ ಅಥವಾ ಮಿಶ್ರಾಹಾರ ಇವುಗಳಿಗೆ ಪ್ಯಾಕಿಂಗ್ ಮೇಲೆ ಬೇರೆ ಬೇರೆ ಬಣ್ಣಗಳಿಂದ ಸೂಚಿಸಿರುತ್ತಾರೆ! ಸಸ್ಯಹಾರಕ್ಕೆ 'ಹಸಿರು', ಮಾಂಸಾಹಾರಕ್ಕೆ 'ಕೆಂಪು' ಮತ್ತು ಎರಡನ್ನು ಬಳಸಿ ಮಾಡಿರುವ ಪದಾರ್ಥಗಳಿಗೆ "ಕಂದುಬಣ್ಣ" ಈಗ ನೋಡಿದರೆ ಬರಿ ಸಸ್ಯಹಾರವನ್ನೇ ನಂಬಿರುವಂತಹವರ ಪಾಡೇನು?

ಕೆಳಗಿನ ಈ ಲೇಖನ ನನ್ನ ಕಸಿನ್ ನನಗೆ ಈ - ಮೇಲ್ ನಲ್ಲಿ ಕಳಿಸಿದ್ದು. ಇದನ್ನು ನೀವೂ ಓದಲೆಂದು ನನ್ನ ಬ್ಲಾಗ್ನಲ್ಲಿ ಹಾಕಿದ್ದೇನೆ. ಇದನ್ನು ಓದಿ ನಿಮ್ಮ ಅಭಿಪ್ರಾಯ ತಪ್ಪದೆ ತಿಳಿಸಿರಿ.




http://www.jainworld.com/jainbooks/images/20/UNIVERSAL_DECLARATION_OF_TH.htm

India Sweets - SILVER FOILS ARE NOT VEGETARIAN


SILVER FOILS ARE NOT VEGITARIAN, The silver foils are not very expensive. They are sold by weight. Ordinarily, you can buy a packet of 160 foils for a price between Rs.100 to 200. That is, approximately one rupee per foil. Not only the sweets, now a days it is also applied on fruits. Some Ayurvedic medicines also are wrapped in silver foils.They are made by hammering thin sheets of silver in middle of booklets made of a bull's intestines. In other words, after slaughtering a bull, quickly his intestines are removed, and sold to the manufacturers of foils. The skins made of old intestines are of no use. Even one-day-old intestines can not be used, because within a few hours they stiffen.The foil manufacturer removes blood and stools from the intestines, and cuts them into pieces. Then he puts one piece over another, making a booklet out of it. At his home, or in the factory, he puts one silver (or gold) sheet in-between each page. Then he hammers it hard until those metal sheets turn into thin wafers.The intestines of bulls are so strong, that even repeated hammering do not destroy them, or they do not let the foils move around inside. Because of the hammering, some tissues of the intestine mix with the foils. After that the foil manufacturer sells the bundle of foils to the sweets manufacturers. Some small foil manufacturers sell the foils to the temples.This foil is not only dirty, it also is non-vegetarian.



Even the meat-eaters do not eat intestines. Use of these foils turn even sweets into non-vegetarian food. A few years ago the Indian Airlines learned about this, and since then stopped using them on the sweets served in their planes.Source of Silver Foil in Sweets
Indian Airlines, the domestic air-carrier of India had issued instructions to its suppliers to supply sweet without silver foil called VARAKH. Do you know why? Silver is widely used for various purposes in the market today. Silver is considered precious and its utility is enormous. The reason behind this is that silver reflects back 95% of the light energy that falls on it. The silver foils used for edible purposes is called VARAKH So what's so special about VARAKH? If you keenly observe this VARAKH under a microscope don be perturbed if you happen to see traces of blood, stools and saliva of a cattle or ox. VARAKH is a silver foil and we have no second questions on this, but to prepare this VARAKH important parts of the CATTLE/OX is made use of. Intestines of Cattle/OX are obtained from the slaughterhouse. This is obtained after butchering to death the cattle/ox for beef and the part, which cannot be consumed: the intestines are pulled out of the animal and handed over to the manufacturers of VARAKH. Before handing over the intestines, they are washed in the slaughterhouse to get rid of the blood and other remains on these intestines in the limited facility that is present in the slaughterhouse. We are not sure how neatly this job is carried out. Intestines are cut into small pieces and then are bound together as pages in a notebook. A silver block is placed in the middle of these bound intestines, and the whole thing is placed in a leather bag and sealed. Experts, who know how to make VARAKH, pound the bag with wooden sticks, till the entire bag flattens out. The silver block would by this time be turned into silver foil. This Silver foil would now be separated from the intestine pack and will be placed on paper. This is VARAKH, which reaches the market ready for use. Even staunch vegetarians, who shy away from egg, unknowingly consume this as a part of sweet, pan and arecanut. Some unknowingly consume this because of the additional taste that VARAKH provides.



Now the question is "Why the intestines of the cattle/ox? Why not something else?" The reason behind using the intestines of the cattle/ox for preparing the VARAKH is because of the elasticity of the intestines. They do not get cut even after a severe pounding. This aspect is brought out in the magazine "Beauty without cruelty" and the Television show of Maneka Gandhi, "Heads and Tails". In India, on an average an estimate indicates that 2,75,000 kilos of "VARAKH" is consumed. Can you estimate how many cattle/ox are sacrificed for just a bit of taste? If you are surprised as I am, after reading this article please inform as many as possible so as to ensure that we unknowingly don't consume beef.PanBy now, a pan-lover vegetarian person may have eaten equivalent of many miles of oxen intestines! For them, here is an another bad news - the Chuna that they apply on pan, also is not vegetarian! That is made from the shells of living insects. These insects are taken from the ocean, killed, and removed from the shell. Then the shells are softened in water, dried, and ground into white powder. When you put this Chuna in your mouth, you are participating in killing of many insects. This is no different from taking life of a goat or a pig. Everyone wants to live, no one likes the pain of death.



Indian Sweets and Varakh Silver foil, or varakh, as it is generally known in India, adds glitter to Indian sweets, betel nut (Supari), Paan (betel-leaf) , and fruits. It is also used in Ayurvedic medicines. The silver-topped sweet is even served as prashad in many temples and on auspicious and religious occasions. Varakh is also used in flavoured syrups as in Kesar (saffron) syrup.If one observes Varakh under a microscope one will find traces of blood, stools and saliva of a cattle or an ox. Varakh is not derived from an animal source. However, a crucial material of animal origin, ox-gut, is used in its manufacture. This ox-gut is obtained from the slaughterhouse.The intestine (ox-gut), smeared with blood and mucus, is pulled out from the slaughtered animal by the butcher at the slaughterhouse, and sold for the specific purpose. This is then taken away to be cleaned and used in the manufacture of Varakh.The gut of an average cow, measuring 540 inches in length and 3 inches in diameter, is cut open into a piece measuring 540" x 10". From this, strips of 9" x 10" are cut to give approximately 60 pieces of ox-gut, which are then piled on top of each other and bound to form a book of 171 leaves.Next, small thin strips of silver are placed between the sheets and the book slipped into a leather pouch. These bundles are hammered continuously for a day to produce extremely thin foils of silver of 3" x 5".The leather and ox-gut, being supple, can withstand the intense manual hammering for up to 8 hours a day till such time as the silver is beaten to the desired thickness. When ready, the foil is carefully lifted from between the leaves of ox-gut and placed between sheets of paper to be sold to the sweet shops. A booklet of 160 foils weighs approximately 10 grams and costs few hundred rupees.To make a single booklet of 171 sheets, the guts of 3 cows are used. And the yield per book is generally 160 foils of silver, the rest of which may be damaged or unfit for use. Thus one book, used on an average of 300 days of the year yields approximately 48,000 foils of silver which means that each ox-gut yields an estimated 16,000 foils.


The leather used for the pouch to hold the book (made from ox-gut), is cowhide or calf leather, and uses about 232 sq. inches of material. Assuming the size of an average cowhide to be 18 sq. ft or 2,600 sq. Inches, the yield per hide will be approximately 10 leather pouches.Usually 4 foils are used per kilograms of sweets and the ox-gut of one cow is used to produce foil for approximately 4,000 kilograms of sweets. It is estimated that the average consumption of sweets by a middle class family of four in India is about 100 kilograms per year.Thus, an average middle class Indian family of four consuming approximately 100 kg of sweets per year for forty years consumes silver foil produced with the gut of 3 cows and one-tenth of a cowhide!In India 275 tons of silver is transformed into Varakh that utilises the intestines of 516,000 cows and calf leather of 17,200 animals each year
.
__,_._,___

Wednesday, June 3, 2009

ಶಿರಡಿ ಪ್ರವಾಸದ ಅನುಭವಗಳು....!

ಈ ಲೇಖನವನ್ನು ಎರಡು ವಾರಗಳ ಹಿಂದೆಯೇ ಪೋಸ್ಟ್ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ಬ್ಲಾಗಿಗೆ ಹಾಕಲಾಗಲಿಲ್ಲ. ಈ ಎರಡು ವಾರಗಳು ನಿಮ್ಮೆಲ್ಲರನ್ನು (ಸ್ವತಹ ನನ್ನ ಬ್ಲಾಗೂ ಸೇರಿ) ಮಿಸ್ ಮಾಡಿಕೊಂಡಿದ್ದೆ! ಈಗ ಮತ್ತೆ ಮುಂದುವರೆಸುತ್ತಿದ್ದೇನೆ!!


ಶಿರಡಿಗೆ ಹೋಗಲು ಬಸ್ನಲ್ಲಿ ಸುಮಾರು 18 ರಿಂದ 20 ಗಂಟೆಗಳ ಪ್ರಯಾಣ! ನಾವು ಹೊರಟಿದ್ದು 28 ನೇ ತಾರೀಖು ಗುರುವಾರ, ಬಸ್ ಮಧ್ಯಾನ್ನ 1.00 ಗಂಟೆಗೆ ಇತ್ತು ಮೆಜೆಸ್ಟಿಕ್ ನಿಂದ. ಮಾರನೆ ದಿನ ಬೆಳಗಿನ ಜಾವ ಪುಣೆಯಲ್ಲಿ ಟೈರ್ ಪಂಚರ್ ಆಗಿ ಒಂದು ಗಂಟೆ ಅಲ್ಲೇ ತಡವಾಯಿತು. ಸರಿ ಬೆಳಗ್ಗೆ ಒಂಭತ್ತು ಗಂಟೆಗೆ ಶಿರಡಿ ತಲುಪಿದೆವು! ಹೋಟೆಲ್ ಸಾಯಿ ಬಾ ದಲ್ಲಿ ಕೊಠಡಿಯನ್ನು ಮೊದಲೇ ಕಾದಿರಿಸಿದ್ದೆವು. ಆದರೂ ಅಲ್ಲಿಗೆ ತಲುಪಿದಾಗ ನಾವು ರೂಮ್ ಸಿಗಲು ಮತ್ತೆ ಒಂದು ಗಂಟೆ ಕಾದದ್ದಾಯಿತು! ಈ ಕಾಯುವ ಸಮಯದಲ್ಲೇ, ಅಲ್ಲಿನ ಒಬ್ಬ ಟ್ರಾವೆಲ್ ಏಜೆಂಟ್ ಅಕ್ಕಪಕ್ಕದಲ್ಲಿರುವ ಸ್ಥಳಗಳ ಬಗ್ಗೆ ವಿವರಿಸಿ, ನೋಡಿಬರುವಂತೆ ನಮ್ಮ ಮನವೊಲಿಸಿದ!! ಸರಿ ನಾವೂ ಸಹ ಇಷ್ಟು ದೂರ ಬಂದಿರುವಾಗ ಈ ಸ್ಥಳಗಳನ್ನು ನೋಡದೆ ಹೋದರೆ ಏನು ಪ್ರಯೋಜನ ಎಂದು ಯೋಚಿಸಿ ಒಪ್ಪಿಗೆ ನೀಡಿದ್ದಾಯಿತು. ಅಷ್ಟರಲ್ಲಿ ರೂಮ್ ಸಿಕ್ಕಿತು, ಸ್ನಾನ, ಖಾನ ಎಲ್ಲ ಮುಗಿಸಿ ಹನ್ನೊಂದು ಗಂಟೆಗೆ ಬುಕ್ ಮಾಡಿಕೊಂಡಿದ್ದ ಕಾರ್ ನಲ್ಲಿ ಹೊರಟೆವು. ಅವನು ಹೇಳಿದ್ದು ಒಟ್ಟು ನಾಲ್ಕು ಸ್ಥಳಗಳು, ಅವೆಂದರೆ ಶನಿ ಸಿಂಗ್ನಾಪುರ್, ಎಲ್ಲೋರಾ ಗುಹೆಗಳು, ಜ್ಯೋತಿರ್ಲಿಂಗ ದರ್ಶನ ಮತ್ತು ಮಾರುತಿ (ಆಂಜನೇಯ) ಮಂದಿರ. ಇವೆಲ್ಲಾ ನೋಡಿಕೊಂಡು ಬರುವಷ್ಟರಲ್ಲಿ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಅಲ್ಲಿಗೂ ಆ ಟ್ಯಾಕ್ಸಿ ಯವನು ಮಾರುತಿ ಮಂದಿರಕ್ಕೆ ಹೋಗಲು ಸಮಯ ಸಾಕಾಗುವುದಿಲ್ಲ ಎಂದು ಹೇಳಿದಾಗ ಅದನ್ನು ಕೈಬಿಡಬೇಕಾಯಿತು. ಸರಿ ಹೆಸರಾಂತ ಇತಿಹಾಸಿಕ ಎಲ್ಲೋರಾ ಗುಹೆಗಳನ್ನು ನೋಡುತ್ತೇವಲ್ಲ ಎಂದು ಸಂತೋಷದಿಂದಿದ್ದರೆ, ಅಲ್ಲಿ ಎಲ್ಲೋ ಒಂದು ಕಡೆ ನಿಲ್ಲಿಸಿ ಇನ್ನೂ ಒಳಗಿನ ಗುಹೆಗಳನ್ನು ನೋಡಬೇಕಿದ್ದರೆ ಇಲ್ಲಿಂದ ಆಟೋ ಮಾತಾಡಿಕೊಂಡು ಹೋಗಿಬನ್ನಿ. ಅಲ್ಲಿಗೆ ಹೋಗಿಬರಲು ನೂರು ರೂಪಾಯಿ ಕೇಳುತ್ತಾರೆ, ಇಲ್ಲವಾದರೆ ನನಗೆ ನೂರೈವತ್ತು ರೂಪಾಯಿ ಕೊಟ್ಟರೆ ನಾನೇ ಕರೆದುಕೊಂಡು ಹೋಗುತ್ತೇನೆ ಮತ್ತು ಬೇಗ ಹೇಳಬೇಕು ಯಾಕೆಂದರೆ ಆರು ಗಂಟೆಗೆಲ್ಲ ಬಾಗಿಲು ಮುಚ್ಚಿಬಿಡುತ್ತಾರೆ ಎಂದು ಹೇಳಿದ. ಆಗ ಸಮಯ ನೋಡಿದರೆ 5.15 ಆಗಿತ್ತು, ಅಲ್ಲಿಗೆ ಹೋಗಿಬರಲು ಸಮಯ ಸಾಕಾಗುವುದಿಲ್ಲ ಅದು ಅಲ್ಲದೆ ಇಷ್ಟು ದುಡ್ಡು ಎಂದು ಮೊದಲೇ ಮಾತಾಡಿಕೊಂಡು ಬಂದಿದ್ದರೂ ಇಲ್ಲಿ ಮತ್ತೆ ಹಣ ಕೇಳುತ್ತಿದ್ದಾನಲ್ಲ ಎಂದು ಅದನ್ನೂ ಕೈಬಿಟ್ಟು ಅವನು ನಿಲ್ಲಿಸಿದ್ದಲ್ಲಿಯೇ ಇರುವ ಗುಹೆಗಳನ್ನು ನೋಡಿಕೊಂಡು ಬಂದದ್ದಾಯಿತು. ಇದಲ್ಲದೆ ಅಲ್ಲಲ್ಲಿ ಸಿಗುವ ಚೆಕ್ ಪೋಸ್ಟ್ ಗಳಿಗೂ ಮತ್ತು ಪಾರ್ಕಿಂಗ್ ಸ್ಥಳಗಳಿಗೂ ನಾವೇ ಹಣ ಕೊಡಬೇಕಾಯಿತು. (ಇದನ್ನು ಏಜೆಂಟ್ ನಮಗೆ ಮೊದಲೇ ಹೇಳಿದ್ದ ಆದ್ದರಿಂದ ಕೊಡಲೆಬೇಕಾಯಿತು).

ಶುಕ್ರವಾರ ಅಲ್ಲಿನ ಪ್ರವಾಸವೆಲ್ಲ ಮುಗಿಸಿ ಬಂದ ಮೇಲೆ ರಾತ್ರಿ ಸಾಯಿ ಬಾಬಾರ ದರ್ಶನ ಮಾಡಿದೆವು. ಅಲ್ಲಿ ಒಂದು ದಿನಕ್ಕೆ ನಾಲ್ಕು ಸಲ ಮಾತ್ರ ಆರತಿ ಅಂತ ಮಾಡುತ್ತಾರೆ! ಅದು ಬೆಳಗಿನ ಜಾವ 6-00. ಗಂಟೆ, ಮಹ್ಯಾನ್ನ 12-00 ಗಂಟೆಗೆ, ಸಂಜೆ 6-00 ಕ್ಕೆ ಮತ್ತು ರಾತ್ರಿ 10-30 ಕೊನೆಯ ಪೂಜೆ. ಮತ್ತೆ ಬೆಳಗಿನ ಜಾವ ನಾಲ್ಕು ಗಂಟೆಗೆ ಮಂದಿರದ ಬಾಗಿಲು ತೆಗೆಯುತ್ತಾರೆ! ಇದಲ್ಲದೆ ಬಾಬಾರ ದರ್ಶನಕ್ಕೆ ಬೆಳಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೂ ಯಾವಾಗ ಬೇಕಾದರೂ ಹೋಗಿ ಬರಬಹುದು ಆದರೆ ಮೇಲೆ ಹೇಳಿದ ಸಮಯದಲ್ಲಿ ಅಂದರೆ ಆರತಿ ಮಾಡುವಾಗ ಒಳಗಿನವರನ್ನು ಹೊರಗೆ ಬಿಡುವುದಿಲ್ಲ ಮತ್ತು ಗರ್ಭ ಗುಡಿಯ ಹೊರಗೆ ಸಾಲಿನಲ್ಲಿ ನಿಂತಿರುವವರನ್ನು ಆ ಸಮಯದಲ್ಲಿ ಒಳಗೆ ಬಿಡುವುದಿಲ್ಲ. ಒಳಗೆ ಯಾರಿರುತ್ತಾರೋ ಅವರಿಗೆ ಆ ಆರತಿ ಬೆಳಗುವುದನ್ನು ನೋಡುವ ಅದೃಷ್ಟ!


ಶನಿವಾರ ಬೆಳಗ್ಗೆ ಮತ್ತೊಮ್ಮೆ ಸಾಯಿ ಬಾಬಾರ ದರ್ಶನ ಮಾಡಿಕೊಂಡು, ಅಲ್ಲೇ ಹತ್ತಿರದಲ್ಲೆ ಇದ್ದ ಖಂಡೋಬ ಮಂದಿರಕ್ಕೆ ಭೇಟಿ ನೀಡಿ (ಆ ಊರಿಗೆ ಬಂದಾಗ ಬಾಬಾರವರು ಮೊದಲು ಇಲ್ಲಿಯೇ ತಂಗಿದ್ದರಂತೆ) ನಂತರ ಅಲ್ಲೆಲ್ಲ ಸುತ್ತಾಡಿ ಮತ್ತೆ ರೂಮಿಗೆ ಬಂದು ಸ್ವಲ್ಪ ಹೊತ್ತು ವಿಶ್ರಮಿಸಿ, ಮಧ್ಯನ್ನ ಒಂದು ಗಂಟೆಯ ಹಾಗೆ ಬಾಬಾರವರ ಪ್ರಸಾದ ಮಂದಿರದಲ್ಲಿ ಊಟ ಮಾಡಿಕೊಂಡು ಬಂದೆವು. ಮತ್ತೆ ನಾಲ್ಕು ಗಂಟೆಗೆ ಬಸ್ ಇದ್ದುದರಿಂದ ಊಟ ಮುಗಿಸಿ ಬಂದ ಮೇಲೆ ಪ್ಯಾಕಿಂಗ್ ಕೆಲಸ ಮುಗಿಸಿ ಮೂರು ಗಂಟೆಗೆ ರೂಮ್ ಖಾಲಿ ಮಾಡಿ ಬಿಲ್ ಭರ್ತಿ ಮಾಡಿ, ಬಸ್ ಬರುವಲ್ಲಿಗೆ ಆಟೋದಲ್ಲಿ (ನಾವು ಎಲ್ಲಿ ಇಳಿದಿದ್ದೆವೋ ಅಲ್ಲಿಗೆ) ಬಂದು ತಲುಪಿದೆವು. ಆ ಸ್ಥಳ ಬೇರೆ ಒಂದು ಹೋಟೆಲ್ ಆಗಿತ್ತು!

ಬಸ್ಸಲ್ಲಿ ಲಗ್ಗೇಜ್ ಅನ್ನು ಕ್ಯಾಬಿನ್ ನಲ್ಲಿ ಇಟ್ಟು, ಬಸ್ಸೊಳಗೆ ಹೋಗಿ ಕುಳಿತಿದ್ದೆವು. ಬಸ್ ಹೊರಡುವುದಕ್ಕೆ ಇನ್ನು ಹತ್ತು ನಿಮಿಷಗಳಿದ್ದವು. ನಾನು ಅಷ್ಟರಲ್ಲಿ ಹೋಟೆಲ್ ನ ಒಳಗೆ ಇದ್ದ ಟಾಯ್ಲೆಟ್ ಗೆ ಹೋಗಿ, ಬಂದು ಹೊರಗೆ ನೋಡುತ್ತೀನಿ ಬಸ್ ಹೊರಟುಹೋಗುತ್ತಿದೆ!! ನನಗೆ ಗಾಬರಿಯಾಯಿತು, ಕೈ ಗಡಿಯಾರ ನೋಡಿಕೊಂಡೆ ಇನ್ನೂ ಸಮಯವಿತ್ತು. ಹಾಗೆಲ್ಲ ಸಮಯಕ್ಕೆ ಮುಂಚೆನೇ ಹೋಗೋ ಹಾಗೆ ಇಲ್ವಲ್ಲ ಅಂದುಕೊಂಡು ಆ ಗಾಬರಿಯಲ್ಲೇ, ಅಲ್ಲೇ ಇದ್ದ ರಿಸೆಪ್ಶನ್ ನಲ್ಲಿದ್ದವರನ್ನು ವಿಚಾರಿಸಿದೆ, ಅವರು ಹೇಳಿದರು ಬಸ್ ಮತ್ತೆ ಬರುತ್ತೆ ಏನೂ ಗಾಬರಿ ಆಗಬೇಡಿ ಎಂದು. ಆಗ ಸ್ವಲ್ಪ ಸಮಾಧಾನವಾಯಿತು. ನಾನು ನನ್ನ ಹ್ಯಾಂಡ್ ಬ್ಯಾಗ್ ಅನ್ನು ನನ್ನ ಪತಿಯ ಕೈಯಲ್ಲಿ ಕೊಟ್ಟು ಹೋಗಿದ್ದೆ ಆದ್ದರಿಂದಲೇ ಇಷ್ಟು ಗಾಬರಿಯಾದದ್ದು. ಅದು ನನ್ನ ಬಳಿಯೇ ಇದ್ದಿದ್ದರೆ, ಹೋದರೆ ಹೋಗಲಿ ಬೇರೆ ಯಾವ ಬಸ್ನಲ್ಲಾದರೂ ಹೋಗಬಹುದಲ್ಲ ಎನ್ನುವ ಧೈರ್ಯವಿರುತ್ತಿತ್ತು! ಆದರೂ ನನ್ನವರು ಅವರಿಗೆ ಹೇಳಿ ಬಸ್ ಹೊರಡುವುದನ್ನು ತಡೆಯಬಹುದಿತ್ತಲ್ಲಾ ಎಂದು ಅವರನ್ನು ಮನದಲ್ಲೇ ಬೈದುಕೊಳ್ಳುತ್ತಿದ್ದೆ. ಯಾಕೆಂದರೆ ಅವರು ಕೆಲವೊಮ್ಮೆ ಸೀಟ್ ನಲ್ಲಿ ಕುಳಿತ ತಕ್ಷಣ ನಿದ್ದೆ ಮಾಡಿಬಿಡುತ್ತಾರೆ! ಹಾಗಂದುಕೊಂಡೆ ಅಲ್ಲಿರುವ ಮೆಟ್ಟಿಲುಗಳನ್ನು ಇಳಿದು ಕೆಳಗೆ ಬಂದು ನೋಡಿದರೆ, ಪಾಪ ಅವರು ನನ್ನ ಬ್ಯಾಗ್ ಇಟ್ಟುಕೊಂಡು ಅಲ್ಲೇ ನಿಂತಿದ್ದರು!! ಬಸ್ ಮತ್ತೆ ಬರುವ ವಿಷಯ ತಿಳಿದ ಅವರು ನಾನೆಲ್ಲಿ ಗಾಬರಿಯಾಗುತ್ತೇನೋ ಎಂದು ನನಗಾಗಿ ಅವರು ಕೆಳಗೆ ಇಳಿದಿದ್ದರು!!!

ನಾಲ್ಕು ಗಂಟೆಗೆ ಹೊರಡಬೇಕಿದ್ದ ಬಸ್ಸು, ನಾವಿರುವಲ್ಲಿಗೆ ಮತ್ತೆ ಬಂದದ್ದು ನಾಲ್ಕು ಕಾಲಿಗೆ. ಬೇರೆ ಜಾಗಗಳಿಗೆ ಹೋಗಿ ಅಲ್ಲಿನ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಂದಿತ್ತು ಬಸ್. ಇನ್ನೂ ಸೀಟ್ ಗಳು ಖಾಲಿ ಇದ್ದುದರಿಂದ ಬಸ್ನವರಿಗೆ ಆಗಲೂ ಹೊರಡಲು ಮನಸ್ಸಿರಲಿಲ್ಲ, ಇನ್ನೂ ಯಾರಾದರೂ ಪ್ರಯಾಣಿಕರು ಬರುವರೇನೋ ಎಂದು ಕಾಯುತ್ತಿದ್ದರು. ಆಮೇಲೆ ಅಂತೂ ನಾಲ್ಕುವರೆಗೆ ಬಸ್ ಹೊರಟಿತು! ಬಸ್ ಏನೋ ಚಲಿಸುತ್ತಾನೇ ಇದೆ ಆದರೆ ಯಾಕೋ ನಿಧಾನ ಅನ್ನಿಸಿತು, ಒಳ್ಳೆ ಶಟಲ್ ಗಾಡಿ ತರ ಹೋಗುತ್ತಿತ್ತು. ಅರೆ ಇದೇನಿದು ಐರಾವತ ಬಸ್ (ಸಾಮಾನ್ಯವಾಗಿ ತುಂಬಾ ಫಾಸ್ಟ್ ಆಗೇ ಹೋಗುತ್ತೆ, ಆದರೆ ಇಲ್ಲಿ, )ಹೆಸರಿಗೆ ತಕ್ಕ ಹಾಗೆ ಆನೆಯ ತರಾನೆ ಹೋಗ್ತಾ ಇದೆ ಅಂತ ನಾ ಹೇಳಿದ್ದಕ್ಕೆ, ಇನ್ನೂ ಸಿಟಿ ದಾಟಿಲ್ಲಾ ಅನ್ಸುತ್ತೆ ಅಂತ ನನ್ನವರು ಹೇಳಿದರು. ಸಂಜೆ ಆರು ಗಂಟೆಗೆ ಒಂದು ಬ್ರೇಕ್, ಕಾಫಿ, ಟೀ ಕುಡಿಯಲೆಂದು. ಇದೆಲ್ಲ ಆದ ಮೇಲೆ ಮತ್ತೆ ಹೊರಟಿತು. ಆಗ ಅದರಲ್ಲಿ ಒಂದು ಸಿನಿಮಾ ಹಾಕಿದರು, ರಾಮ ಶಾಮ ಭಾಮ. ಕಾಮಿಡಿ ಸಿನಿಮಾ ಅಲ್ವೇ ಎಲ್ಲರೂ ನಕ್ಕಿದ್ದೆ ನಕ್ಕಿದ್ದು ಸಿನಿಮಾ ಮುಗಿಯುವವರೆಗೂ ಬರಿ ನಗುವೇ ತುಂಬಿತ್ತು ಆ ಬಸ್ನಲ್ಲಿ. ಕನ್ನಡ ಅರ್ಥವಾಗದಿದ್ದ ಕೆಲವು ಮಂದಿ ನಾವೆಲ್ಲಾ ನಗುತ್ತಿದ್ದಾಗ ಪೆಚ್ಚಾಗಿ, ಏನೂ ಅರ್ಥವಾಗದೆ ನಗುತ್ತಿದ್ದವರನ್ನೇ ಗುರಾಯಿಸಿ ನೋಡುತ್ತಿದ್ದರು ಪಾಪ.


ಅಪಾಯದಿಂದ ಪಾರಾಗಿ........?!?!

ಆ ಸಿನಿಮಾ ಮುಗಿದ ನಂತರ, ಮತ್ತೊಂದು ಕನ್ನಡ ಸಿನಿಮಾ ಮಿಲನ ಹಾಕಿದರು. ಆ ಸಿನಿಮಾವನ್ನು ಸಹ ನೋಡಿ ಚೆನ್ನಾಗಿ ಎಂಜಾಯ್ ಮಾಡಿದೆವು. ನಂತರ ರಾತ್ರಿ ಹತ್ತು ಗಂಟೆಗೆ ಊಟಕ್ಕೆ ನಿಲ್ಲಿಸಿದ್ದರು. ಮುಕ್ಕಾಲು ಗಂಟೆಯ ನಂತರ ಮತ್ತೆ ಬಸ್ ಹೊರಟಿತು. ಕೊನೆಯಲ್ಲಿ ಇನ್ನೂ ಕೆಲವು ನಿಮಿಷಗಳ ಸಿನಿಮಾ ಇತ್ತು, ಅದನ್ನು ಊಟದ ನಂತರ ನೋಡಿದೆವು. ಅದಾದ ಮೇಲೆ ಮತ್ತೊಂದು ಸಿನಿಮಾ ಹಾಕಿರೆಂದು ಕೆಲವರು, ಬೇಡ ಮಲಗಬೇಕೆಂದು ಇನ್ನು ಕೆಲವರು. ಆದರೆ ಕಂಡಕ್ಟರ್, ಸಾಕಿನ್ನು ಇಷ್ಟೊತ್ತಿನ ಮೇಲೆ ಹಾಕುವುದಿಲ್ಲ ಎಂದು ಹೇಳಿ ಟಿವಿ ಬಂದ್ ಮಾಡಿದರು. ಸಮಯ ಕಳೆದಂತೆ ನಿಧಾನವಾಗಿ ಎಲ್ಲರೂ ನಿದ್ದೆಗೆ ಜಾರಿದ್ದರು. ಸ್ವಲ್ಪ ಸಮಯದ ನಂತರ ಇದ್ದಕ್ಕಿದ್ದಂತೆ ಬಸ್ ಹೊರಳಾಡಲು ಶುರು ಮಾಡಿತು. ಅಯ್ಯೋ ಇದೇನಿದು ಎಂದು ನೋಡಿದರೆ ಡ್ರೈವರ್ ಬೇರೊಂದು ವಾಹನವನ್ನು ಓವರ್ ಟೇಕ್ ಮಾಡುತ್ತಿದ್ದಾಗ ಕಂಟ್ರೋಲ್ ಸಿಗದೇ ಬ್ರೇಕ್ ಹಾಕಿದಾಗ ಬಸ್ ಜರ್ಕ್ ಹೊಡೆಯಿತು. ಈ ರೀತಿ ಆದ ಮೇಲೆ ಕೆಲವರಿಗೆ ಎಚ್ಚರವಾಗಿತ್ತು, ಇನ್ನು ಕೆಲವರು ಏನಾಯಿತೆಂದು ತಿಳಿಯದೆ ಹಾಗೆ ಮಲಗಿದ್ದರು. ಸಂಭಾಳಿಸಿಕೊಂಡು ಹಾಗೆ ಮುಂದುವರೆಯಿತು ಪ್ರಯಾಣ. ಮತ್ತೆ ಕೆಲವು ಗಂಟೆಗಳು ಕಳೆಯವಷ್ಟರಲ್ಲಿ ರೆಡಿಯೇಟಾರ್ ಬಿಸಿಯಾಗಿದೆ ಎಂದು ಸ್ವಲ್ಪ ಹೊತ್ತು ನಿಲ್ಲಿಸಿದ್ದರು. ಅಷ್ಟೊತ್ತಿಗಾಗಲೇ ಅವರುಗಳಿಗೆ (ಡ್ರೈವರ್, ಕಂಡಕ್ಟರ್) ಬೇರೆ ಏನೋ ತೊಂದರೆ ಆಗಿದೆಯೆಂದು ಗೊತ್ತಾಗಿರಬೇಕು! ಅವರು ಡಿಪೋ ಮತ್ತು ಆಫೀಸ್ ಗಳಿಗೆ ಫೋನ್ ಮಾಡಿ ತೊಂದರೆ ವಿವರಿಸುತ್ತಿದ್ದರು ಆದರೆ ಏನಾಯಿತೋ ಗೊತ್ತಿಲ್ಲ ಮತ್ತೆ ನಿಧಾನವಾಗಿ ಅದರಲ್ಲೇ ಮುಂದುವರೆದರು.

ಬೆಳಕು ಹರಿದಿತ್ತು, ಬಸ್ ಚಲಿಸುತ್ತಲೇ ಇತ್ತು ನಿಧಾನವಾಗಿ! ಮತ್ತೆ ಒಂದೆರಡು ಸಲ ಆಗಾಗ ಬಸ್ ಅದೇ ರೀತಿ ಆಡುತ್ತಿತ್ತು ಆದರೆ ಮೊದಲಿನಷ್ಟಿರಲಿಲ್ಲ. ಅದ್ಯಾವುದೋ ಊರಿನ ಬಸ್ ಸ್ಟ್ಯಾಂಡ್ ನಲ್ಲಿ ಬೆಳಗ್ಗೆ ಏಳು ಗಂಟೆಗೆ ನಿಲ್ಲಿಸಿದ್ದರು. ಅಲ್ಲಿಂದಲೂ ಡ್ರೈವರ್ ಯಾರಿಗೋ ಫೋನ್ ಮಾಡಿ ಬದಲಿ ಬಸ್ ಅಥವಾ ಇದೆ ಬಸ್ಸನ್ನು ಪರಿಶೀಲಿಸಲು ಯಾರನ್ನಾದರೂ ಕಳಿಸುವಂತೆ ಕೇಳುತ್ತಿದ್ದರು. ಆದರೆ ಯಾಕೋ ಏನೋ ಯಾವುದೂ ಆಗಲಿಲ್ಲ. ತೊಂದರೆ ಚಿಕ್ಕದೇನಾಗಿರಲಿಲ್ಲ, ಸ್ವಲ್ಪ ಜಾಸ್ತಿಯೇ ಇತ್ತು ಅದೇನೆಂದರೆ ಬಸ್ಸಿಗೆ ನೇರವಾಗಿ ಚಲಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಜಾಸ್ತಿ ಏನಾದರೂ ಚಕ್ರಗಳನ್ನು ಎಡಕ್ಕೆ ಬಲಕ್ಕೆ ತಿರುಗುವಂತೆ ಸ್ಟೇರಿಂಗ್ ತಿರುಗಿಸುತ್ತಿದ್ದರೆ, ಮುಂದಿನ ಎಡಭಾಗದ ಚಕ್ರ ತಿರುಗದೆ ತಡೆದುಕೊಳುತ್ತಿತ್ತು!


ಚಿತ್ರದುರ್ಗಕ್ಕೆ ಇನ್ನೂ ಸುಮಾರು ಐವತ್ತು ಕಿಲೋಮೀಟರು ಇತ್ತು. ಆಗ ಅಲ್ಲಿ ಕಾದಿತ್ತು ನೋಡಿ ಅಪಾಯ! ಮುಂದೆ ಎರಡು ಗೂಡ್ಸ್ ಲಾರಿಗಳು ಹೋಗುತ್ತಿದ್ದವು. ಅದನ್ನು ಹಿಂದೆ ಹಾಕುವ (overtake) ಸಲುವಾಗಿ ಬಲಕ್ಕೆ ಬಂದು ಮುಂದೆ ಹೋಗಬೇಕೆನ್ನುವಷ್ಟರಲ್ಲಿ ಎದುರುಗಡೆಯಿಂದ ಮಾರುತಿ ವ್ಯಾನ್ ಒಂದು ಸ್ಪೀಡಾಗಿ ಬರುತ್ತಿತ್ತು! ಅದಕ್ಕೆ ಜಾಗ ಕೊಡುವ ಸಲುವಾಗಿ ಮತ್ತೆ ಎಡಕ್ಕೆ ಸ್ಟೇರಿಂಗ್ ತಿರುಗಿಸಿದಾಗ, ಅದು ತಿರುಗದೆ ಚಕ್ಕನೆ ನಿಂತುಬಿಟ್ಟಿತು. ಒಂದರೆಕ್ಷನದಲ್ಲೇ ಅದು ತಿರುಗಿಲ್ಲವಲ್ಲ ಎಂದು ಸ್ವಲ್ಪ ಬಲಕ್ಕೆ ತಿರುಗಿಸಿದಾಗ ಮತ್ತೆ ಕಂಟ್ರೋಲ್ ಸಿಗದೇ ಪೂರ್ತಿ ಬಲಕ್ಕೆ ಹೋಗಿಬಿಟ್ಟಿತು. ಇನ್ನೇನು ನಮ್ಮ ಬಸ್ ಮತ್ತು ಆ ಮಾರುತಿ ವ್ಯಾನ್ ಮುಖಾಮುಖಿ ಅಪ್ಪಳಿಸಬೇಕು, ಅಷ್ಟರಲ್ಲಿ ಆ ಗಾಬರಿಯಲ್ಲೂ ಡ್ರೈವರ್ ತಕ್ಷಣ ಎಡಕ್ಕೆ ತಿರುಗಿಸಿದಾಗ ಸಧ್ಯ ಆಗ ಎಡಕ್ಕೆ ಬಂತು! ಆದರೆ ಗಾಬರಿಯಿಂದ ಡ್ರೈವರ್ ಮತ್ತೆ ಬಲಕ್ಕೆ ತಿರುಗಿಸಿದಾಗ ಎದುರು ದಿಕ್ಕಿನಿಂದ ಇನ್ನೊದು ಲಾರಿ ಬರುತ್ತಿತ್ತು, ಅದಕ್ಕೆ ಡಿಕ್ಕಿ ಹೊಡೆಯುವುದನ್ನು ಹೇಗೋ ತಪ್ಪಿಸಿದ್ದ (ಎಲ್ಲ ಆ ದೇವರ ದಯೆ, ಇಲ್ಲದಿದ್ದರೆ ಯಾರ್ಯಾರಿಗೆ ಏನೇನು ಆಗಿಬಿಡುತ್ತಿತ್ತೋ ಗೊತ್ತಿಲ್ಲ) ಆ ಕಡೆ ವ್ಯಾನ್ ಡ್ರೈವ್ ಮಾಡುತ್ತಿದ್ದವರು ಅಂತಹ ಆತಂಕದ ಪರಿಸ್ಥಿತಿಯಲ್ಲೂ ವ್ಯಾನ್ ಅನ್ನು ಇನ್ನೂ ಎಡಕ್ಕೆ ಚಲಾಯಿಸಿದರು. ಹೆಚ್ಚು ಕಡಿಮೆ ಅದು ಗದ್ದೆಯೊಳಗೆ ನುಗ್ಗಿಬಿಡುವುದರಲ್ಲಿತ್ತು! ಸಧ್ಯ ಹೇಗೋ ಅವರು ನಿಭಾಯಿಸಿ ಆಗುತ್ತಿದ್ದ ಅಪಘಾತವನ್ನು ತಪ್ಪಿಸಿದ್ದರು. ಇತ್ತ ನಮ್ಮ ಬಸ್ ರೋಡ್ ಪೂರ್ತಿ ಹಾವಿನಂತೆ ಹರಿದಾಡಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಂತಿತು. ಅದನ್ನು ಸ್ವಲ್ಪ ಪಕ್ಕಕ್ಕೆ ಸರಿಯಾಗಿ ನಿಲ್ಲಿಸಿ, ವ್ಯಾನ್ ನವರಿಗೆ ಏನಾದರೂ ತೊಂದರೆ ಆಯ್ತಾ ಎಂದು ನೋಡಲು ಡ್ರೈವರ್ ಇಳಿದು ಹೋದ. ನಾವೆಲ್ಲರೂ ಸಹ ಸಧ್ಯ ನಮಗೆ ಯಾರಿಗೂ ಏನೂ ತೊಂದರೆ ಆಗಿಲ್ಲ ಪಾಪ ಅವರುಗಳಿಗೆನಾಯಿತು ಎಂದು ನೋಡಲು ತಕ್ಷಣ ಇಳಿದು ಹೋದೆವು! ಅಷ್ಟರಲ್ಲಾಗಲೇ ಅವರು ಇಳಿದು ಬಂದು ನಮ್ಮ ಬಸ್ ಡ್ರೈವರ್ ಅನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಮಾತಿನ ಚಕಮಕಿ, ವಾಗ್ವಾದ ಎಲ್ಲ ಮುಗಿಯುವಷ್ಟರಲ್ಲಿ ಪುಣ್ಯಕ್ಕೆ ಬೇರೆ ಯಾವ ಗಾಡಿಯು ಆ ಮಾರ್ಗವಾಗಿ ಬಂದಿರಲಿಲ್ಲ. ಮತ್ತೆ ತಿರುಗಿ ಬಸ್ ಹತ್ತಿರ ಬಂದಾಗ ಯಾರಿಗೂ ಮತ್ತೆ ಅದೇ ಬಸ್ನಲ್ಲಿ ಮುಂದುವರೆಯುವ ಧೈರ್ಯವಿರಲಿಲ್ಲ ಯಾಕೆಂದರೆ ಅಷ್ಟರಲ್ಲಿ ಪ್ರತಿಯೊಬ್ಬರಿಗೂ ತಿಳಿದಿತ್ತು ಬಸ್ ಗೆ ಗಾಢವಾದ ತೊಂದರೆ ಇದೆ ಎಂದು. ಆದರೆ ಮುಂದಿನ ಊರು ಸಿಗುವವರೆಗೂ ಏನೂ ಮಾಡುವಂತ ಪರಿಸ್ಥಿತಿ ಅಥವಾ ಆಯ್ಕೆ ಇರಲಿಲ್ಲ. ಆಗುತ್ತಿದ್ದ ಅಪಘಾತ ತಪ್ಪಿಸಿದ್ದಕ್ಕೆ ಕೆಲವರು ಪ್ರಶಂಸಿಸಿದರು. ಆ ಧೈರ್ಯದ ಮೇಲೆ ಡ್ರೈವರ್, ನಿಧಾನವಾಗೆ ಬಸ್ ಚಲಾಯಿಸುತ್ತೇನೆ ಎಂದು ಅಭಯ ನೀಡಿದ. ಅವನ ಮಾತಿಗೆ ಒಪ್ಪಿ ಎಲ್ಲರೂ ಮತ್ತೆ ಬಸ್ ಹತ್ತಿದೆವು, ಆದರೂ ಆತಂಕದಿಂದ ಇನ್ನೂ ಹೊರಬಂದಿರಲಿಲ್ಲ. ಇಷ್ಟೆಲ್ಲಾ ಆದರೂ ಇನ್ನೊಬ್ಬ ಡ್ರೈವರ್ ಗೆ (ತುಂಬಾ ದೂರದ ಪ್ರಯಾಣವಿದ್ದರೆ ಅಂತಹ ಕಡೆಗೆ ಖಡ್ಡಾಯವಾಗಿ ಇಬ್ಬರು ಡ್ರೈವರ್ ಹಾಗೂ ಒಬ್ಬ ಕಂಡಕ್ಟರ್ ಇರುತ್ತಾರೆ.) ಹಾಗೂ ಒಂದಿಬ್ಬರು ಹುಡುಗರಿಗೆ ಎಚ್ಚರವೇ ಇರಲಿಲ್ಲ!

ಹಾಗೆ ನಿಧಾನವಾಗಿ ಚಿತ್ರದುರ್ಗ ಬಂತು, ನಂತರ ಹಿರಿಯೂರು. ಅಲ್ಲಿ ತಿಂಡಿಗಾಗಿ ನಿಲ್ಲಿಸಿದ್ದರು ಆಗ ಸಮಯ ಬೆಳಗ್ಗೆ ೧೧-೦೦ ಗಂಟೆ ಆಗಿತ್ತು. ತಿಂಡಿ ತಿಂದು ಮತ್ತೆ ಬಸ್ ಹತ್ತಿದಾಗ ಡ್ರೈವರ್ ಬದಲಾದರು (ಅದೇ ಮಲಗಿದ್ದರಲ್ಲ ಅವರು. ಮತ್ತು ರಾತ್ರಿ ಒಮ್ಮೆ ಆ ರೀತಿ ಬಸ್ ಉರಳಾಡಿದಾಗ ಈ ಡ್ರೈವರ್ ರೆ ಚಲಾಯಿಸುತ್ತಿದ್ದರು.) ನಡೆದ ಘಟನೆ ಇವರಿಗೆ ವಿವರಿಸಿದ್ದರಿಂದ ಮತ್ತು ಸ್ವತಹ ಅವರಿಗೆ ಬಸ್ ತೊಂದರೆಯಲ್ಲಿರುವ ವಿಷಯ ಗೊತ್ತಿದ್ದರಿಂದ, ಎಷ್ಟು ನಾಜೂಕಾಗಿ ಬಸ್ ಚಲಾಯಿಸಿಕೊಂಡು ಬಂದರೆಂದರೆ, ನಾವೆಲ್ಲಾ ಆತಂಕದಿಂದ ಮುಕ್ತರಾಗಿ ಬೆಂಗಳೂರು ತಲುಪುವಷ್ಟರಲ್ಲಿ ಇನ್ನೊದು ಸಿನಿಮಾ 'ಮುಸ್ಸಂಜೆ ಮಾತು' ನೋಡಿದ್ದೆವು!
ನಮ್ಮನ್ನೆಲ್ಲಾ ಕ್ಷೇಮವಾಗಿ ಮನೆಗೆ ತಲುಪುವಂತೆ ಮಾಡಿದ ಆ ಡ್ರೈವರ್ ಗಳಿಬ್ಬರಿಗೂ ಮತ್ತು ಕಂಡಕ್ಟರ್ ಗೂ ಸಹ ತುಂಬು ಹೃದಯದ ಧನ್ಯವಾದಗಳು!

Tuesday, June 2, 2009

ಹೀಗೊಂದು ವಿಚಿತ್ರ ಪ್ರೇಮ ಕಥೆ

ಕೊನೆಯ ಭಾಗ ........

ಇಲ್ಲಿ ಅವರ ಮೂವರ ಜೀವನದ ನಿರ್ಧಾರ ಕೊನೆಗೂ ಒಂದೇ ಆಗಿತ್ತು!!! ಅದೇನೆಂದರೆ ಸ್ನೇಹದಲ್ಲಿ, ಪ್ರೀತಿಯಲ್ಲಿ ನಾವೆಂದೆಂದು ಒಂದೇ ಎನ್ನುವ ತಾರಕ ಮಂತ್ರ ಅವರುಗಳ ಮನದಲ್ಲಿ ಒಂದೇ ರೀತಿಯ ಭಾವನೆಯನ್ನು ಮೂಡಿಸಲು ವಿಧಿ ಅವರಿಗೆ ಸಹಕರಿಸಿತ್ತು!
ಹೇಗೆಂದರೆ, ಇತ್ತ ವಸುಧಾಳ ಆಲೋಚನೆಗಳು ಇದ್ದುದೇನೆಂದರೆ, ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿದರೆ ಇನ್ನೊಬ್ಬರಿಗೆ ನೋವುಂಟಾಗಿ, ನಮ್ಮ ಸ್ನೇಹಕ್ಕೆ ಧಕ್ಕೆ ಬರುತ್ತದೆ. ಅದು ನನಗೆ ಕನಸಿನಲ್ಲೂ ಇಷ್ಟವಾಗದ ಮಾತು!! ಇವರಿಬ್ಬರನ್ನೂ ಬಿಟ್ಟು ನಾನು ಬೇರೊಬ್ಬನನ್ನು ಮದುವೆಯಾದದ್ದೇ ಆದರೆ, ಅವನು ನಮ್ಮ ಸ್ನೇಹವನ್ನು ಅರ್ಥಮಾಡಿ ಕೊಳ್ಳುವವನಾದರೆ ಪರವಾಗಿಲ್ಲ ಇಲ್ಲದಿದ್ದರೆ ಅವನ ಸಂಶಯಕ್ಕೆ ನಾವು ಒಬ್ಬರಿಗೊಬ್ಬರು ಬೇರೆ ಆಗಬೇಕಾಗುತ್ತದೆ. ಅಥವಾ ಇದೇ ರೀತಿ ಅವರಿಬ್ಬರ ಪತ್ನಿಯರಲ್ಲಿ ಯಾರಾದರೂ ಹೀಗೆ ಇದ್ದರೇ..........? ಇದ್ಯಾವ ಗೋಜಲೂ ಬೇಡವೆಂದೇ ದೇವರು ನಮ್ಮನ್ನು ಈ ರೀತಿ ಒಂದು ಮಾಡಿರಬಹುದು! ಇದೇ ನಿಜವಾದರೆ ಅವನ ನಿಯಮ ಮುರಿಯುವ ಹಕ್ಕು ನಮಗ್ಯಾರಿಗೂ ಇಲ್ಲ ಅಲ್ಲವೇ. ಅದಕ್ಕೆ ನಾನು ಎಲ್ಲ ವಿಧದಲ್ಲೂ ಆಲೋಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದು ಎಂದು ತನ್ನ ಗೆಳತಿಯ ಬಳಿ ತನ್ನ ಮನದ ವಿಚಾರಗಳನ್ನು ಪ್ರಸ್ಥಾಪಿಸಿದ್ದಳು! ಇವಳ ಈ ಮಾತುಗಳನ್ನು ಕೇಳಿದ ಗೆಳತಿಯೂ ಸಹ ಅವಳ ನಿರ್ಣಯಕ್ಕೆ ತಲೆದೂಗಿ ಅವಳನ್ನು ಬೆಂಬಲಿಸಿದ್ದಳು.

ಅತ್ತ ಅವರಿಬ್ಬರೂ ಸಹ ಮರಗಳ ಮರೆಯಲ್ಲಿ ಮರೆಯಾಗಿ ಹೋಗಿ, ವಸುಧಾ ಇಬ್ಬರನ್ನು ಕುರಿತು ಇಬ್ಬರೂ ಇಂದು ಸರಿಯಾದ ನಿರ್ಧಾರ ಮಾಡಿಕೊಂಡು ಬನ್ನಿ ಎಂದು ಹೇಳಿದ್ದ ವಿಷಯದ ಬಗ್ಗೆ ಮತ್ತೇ ಸಾಕಷ್ಟು ಯೋಚಿಸಿ ತಲೆ ಕೆಡಿಸಿಕೊಂಡ ಮೇಲೆ, ಅಧ್ಬುತ, ಆಶ್ಚರ್ಯ ಎನ್ನುವಂತೆ ಆಕಾಶ್ ಮತ್ತು ಆದಿಗೂ ಸಹ ಒಮ್ಮೆಲೇ ನಾವುಗಳು ಯಾಕೆ ಇಬ್ಬರೂ ಅವಳನ್ನೇ ಮದುವೆಯಾಗಬಾರದು? ಒಂದು ವೇಳೆ ಅವಳು ಇದಕ್ಕೆ ಒಪ್ಪದಿದ್ದರೆ ನಾವುಗಳೇ ಅವಳಿಗೆ ತಿಳಿಸಿ ಹೇಳಿ ಹೇಗಾದರೂ ಒಪ್ಪಿಸೋಣ ಎಂದು ಕೆಲವು ಯೋಜನೆಗಳನ್ನು ಮಾಡಿಕೊಂಡು, ಅವರಿಬ್ಬರೂ ಸಹ ಇದಕ್ಕೇ ಬದ್ದರಾಗಿ ಇರುವ ಬಗ್ಗೆ ಒಬ್ಬರಿಗೊಬ್ಬರು ಪ್ರಮಾಣಿಸಿಕೊಂಡು, ಒಪ್ಪಿ ಅವಳಿರುವಲ್ಲಿಗೆ ಹೋದರು! ಅಲ್ಲಿಗೆ ಹೋದ ಮೇಲೆ ಅವಳಿಗೂ ಇದೇ ರೀತಿ ಆಲೋಚನೆಗಳಿದ್ದುದನ್ನು ಕೇಳಿ ತಿಳಿದ ಅವರು ಬೆಸ್ತೋ ಬೇಸ್ತು!!! ಅವರುಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ಬಿಂದು ಅವರುಗಳನ್ನು ಕುರಿತು, ಚೆನ್ನಾಗಿವೆ ನಿಮ್ಮ ನಿಮ್ಮ ಆಲೋಚನೆಗಳು! ನಿಮಗೆ ಇಟ್ಟಿರುವ ಹೆಸರುಗಳನ್ನು ಸಾರ್ಥಕ ಮಾಡಿಕೊಂದ್ದೀರಿ! ವಸುಧಾ = ಭೂಮಿ, ಆಕಾಶ್ = ಆಗಸ ಮತ್ತು ಆದಿತ್ಯ = ಸೂರ್ಯ ಇವು ಮೂರು ಒಂದನ್ನೊಂದು ಬಿಟ್ಟಿರದ ಹಾಗೆ ನೀವುಗಳೂ ಸದಾ ಇದೇ ರೀತಿ ಜೀವನದ ಅಂತ್ಯದವರೆಗೂ ಒಂದಾಗಿರಿ! ಇದೇ ನನ್ನ ಆಶೀರ್ವಾದ, ಹಾರೈಕೆ ಎಲ್ಲವೂ ಎಂದು ಹೇಳುತ್ತಾ ವಸುಧಾಳನ್ನು ತಬ್ಬಿಕೊಂಡು, ಹಣೆಗೊಂದು ಮುತ್ತನ್ನಿಟ್ಟಳು. ಅದನ್ನು ನೋಡುತ್ತಾ ನಿಂತಿದ್ದ ಆಕಾಶ್ ಮತ್ತು ಆದಿ, ಹಲೋ ಮಿಸ್ ಬಿಂದು ಇದು ನಾವು ಮಾಡ ಬೇಕಾಗಿರುವ ಕೆಲಸ ಗೊತ್ತಾ.... ಎಂದು ಹೇಳುವಷ್ಟರಲ್ಲಿ ಇವರಿಬ್ಬರೂ ಹುಸಿಮುನಿಸು ತೋರಿಸುತ್ತಾ ಅವರಿಬ್ಬರ ಬೆನ್ನಟ್ಟಿ ಅವರನ್ನು ಗುದ್ದಲು ಹೋದಾಗ, ಅವರು ತಪ್ಪಿಸಿಕೊಳ್ಳಲು ಹೋಗಿ ಸಾಧ್ಯವಾಗದೇ ಸಿಕ್ಕಿ ಬಿದ್ದು ಗುದ್ದಿಸಿಕೊಂಡರು. ಅಲ್ಲಿ ಸಮುದ್ರದ ಅಲೆಗಳ ಭೋರ್ಗರೆತದೊಂದಿಗೆ ಇವರೆಲ್ಲರ ನಗುವೂ ಬೆರೆತು ಬಾಹ್ಯ ಪ್ರಪಂಚವನ್ನೇ ಮರೆಸಿತ್ತು!!!!!

.......ಮುಗಿಯಿತು.

Wednesday, May 27, 2009

ಧನ್ಯವಾದಗಳು......!

ನನ್ನ ಬ್ಲಾಗ್ ಸ್ನೇಹಿತರಿಗೆ ಒಂದು ಮನವಿ, ತಾಂತ್ರಿಕ ತೊಂದರೆಯಿಂದಾಗಿ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಉತ್ತರ ಬರೆಯಲಾಗಲಿಲ್ಲ, ಇದಕ್ಕಾಗಿ ವಿಷಾದಿಸುತ್ತೇನೆ. ಆದ್ದರಿಂದ ಈ ವಿಧಾನದಲ್ಲಿ ಹೀಗೆ ಬರೆದಿದ್ದೇನೆ, ಅನ್ಯತಾ ಭಾವಿಸಬೇಡಿ! ತೊಂದರೆ ನಿವಾರಣೆಯಾದ ಮೇಲೆ ಉತ್ತರಿಸೋಣ ಎಂದರೆ, ನಾನು ನಾಲ್ಕು ದಿನ ಊರಿನಲ್ಲಿರುವುದಿಲ್ಲ. ಶಿರಡಿ ಗೆ ಹೊರಟಿರುವೆ! ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಹೀಗೆ ನನ್ನ ಮೇಲಿರಲಿ ಎಂದು ಆಶಿಸುತ್ತೇನೆ, ಧನ್ಯವಾದಗಳು!!

ನಾಗೇಶ್ ಆಚಾರ್ ಅವರಿಗೆ,

ಸ್ವಾಗತ! ನೀವು ನನ್ನ ಬ್ಲಾಗಿಗೆ ಭೇಟಿ ನೀಡಿ ಕಥೆ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು! ಹೀಗೆ ಭೇಟಿ ನೀಡುತ್ತಿರಿ.

ಮನಸು ಅವರೇ,

ನಿಮ್ಮ ತಾಳ್ಮೆಗೆ ಧನ್ಯವಾದಗಳು! ಆದಷ್ಟು ಬೇಗ ಮುಂದಿನ ಭಾಗ ಪ್ರಕಟಿಸುತ್ತೇನೆ. ಹೀಗೆ ಭೇಟಿ ನೀಡುತ್ತಿರಿ.

ಪ್ರಭು ಅವರೇ,

ಹೀಗೆ ಮತ್ತೆ ಕಾಯಿಸುತ್ತಿರುವುದಕ್ಕೆ ಕ್ಷಮೆಯಿರಲಿ! ಬಹು ಬೇಗ ಮುಂದಿನ ಭಾಗ ಪ್ರಕಟಿಸುತ್ತೇನೆ. ( ಹಾಗೆ ವಸುಧಾಳಿಗೆ ನಿಮ್ಮನ್ನು ಭೇಟಿಯಾಗುವಂತೆ ತಿಳಿಸುತ್ತೇನೆ ಹ್ಹ ಹ್ಹಾ.......)

Saturday, May 9, 2009

ರಜಾ....ಮಜಾ.....!

ಈ ಸಲ ಬರದ ಲೇಖನ ಯಾಕೋ ಸರಿಯಿಲ್ಲ ಎನ್ನುವ ಅಸಮಾಧಾನ. ನಡೆದಿದ್ದ ಒಂದೆರಡು ತಮಾಷೆ/ಹುಚ್ಚು ಪ್ರಸಂಗವನ್ನು ಬರೆದಿರುವೆ! ನಿಮ್ಮ ಅಭಿಪ್ರಾಯ ಏನಿದ್ದರೂ ಸರಿ ತಿಳಿಸಿ!!

ಬೇಸಿಗೆ ರಜೆಯಾದ್ದರಿಂದ ಮನೆಯಲ್ಲಿ ಒಂದೇ ಸಮನೆ, ನೆಂಟರುಗಳ ಆಗಮನ. ಕಳೆದ ವಾರ ಲೇಖನ ಬರೆಯಲು ಸಮಯವೇ ಕೂಡಿಬಂದಿರಲಿಲ್ಲ. ಎಷ್ಟೊಂದು ಕೆಲಸ, ಆಗಾಗ ಓಡಾಟ, ಮಾತುಗಳಂತೂ ಮುಗಿಯುವುದೇ ಇಲ್ಲ! ಹಳೆಯ ನೆನಪುಗಳು, ಹೊಸ ವಿಚಾರಗಳು, ಆಗು-ಹೋಗುಗಳ ಬಗ್ಗೆ, ಒಂದಾ, ಎರಡ.......ರಾತ್ರಿಯ ಊಟ, ಕೆಲಸ ಎಲ್ಲಾ ಮುಗಿಸಿ, ಮಾತಿಗಿಳಿದರೆ ಮುಗಿಯಿತು! ಸಮಯ ಸರಿಯುವುದೇ ತಿಳಿಯುವುದಿಲ್ಲ. ನಮ್ಮ ದಿನನಿತ್ಯದ ವೇಳೆಯ ಪಟ್ಟಿಯಲ್ಲಿ ಅಸ್ಥವ್ಯಸ್ಥ! ಆದರೂ ಇವೆಲ್ಲ ಒಂದು ರೀತಿಯ ಮಜಾ!

ಸಾಮಾನ್ಯವಾಗಿ ನಾವು ಅಕ್ಕ ತಂಗಿಯರು ಪ್ರತಿವರ್ಷ ತವರಿನಲ್ಲೇ ಸೇರುತ್ತಿದ್ದೆವು. ಆದರೆ ಈ ಸಲ ಸ್ವಲ್ಪ ಬದಲಾವಣೆ, ನನ್ನ ಒಡಹುಟ್ಟಿದ ಅಕ್ಕನನ್ನು ಬಿಟ್ಟು ಎಲ್ಲರೂ ಈ ಬಾರಿ ನಮ್ಮ ಮನೆಗೆ ಭೇಟಿ ನೀಡಿದ್ದರು! ಊರಿನಲ್ಲಾದರೆ ನೆಂಟರು, ಸಂಭಂದಿಕರು ಎಲ್ಲ ಹತ್ತಿರದಲ್ಲೆ, ಅಕ್ಕಪಕ್ಕದ ಮನೆ, ಅಕ್ಕಪಕ್ಕದ ರಸ್ತೆಗಳಲ್ಲೇ ಇರುವುದರಿಂದ ಅಲ್ಲಿಗೆ ಹೋದರೆ ಸಾಕು, ತುಂಬಾ ದಿನಗಳಿಗೆ ಹೋದರೆ ಅಂತು ಮುಗಿಯಿತು, ತಿಂದು ತಿಂದು ಒಂದೆರಡು ಸುತ್ತು ದಪ್ಪ ಆಗುವುದು ಖಂಡಿತ! ಹೋಗಿದ್ದ ದಿನದಿಂದ ಹಿಂದಿರುಗಿ ಬರುವ ದಿನದವರೆಗೂ ನೋಡಿದ ಪ್ರತಿಯೊಬ್ಬರಿಗೂ, ಯಾವಾಗ ಬಂದಿರಿ ಎನ್ನುವ ಪ್ರಶ್ನೆಗೆ ಉತ್ತರಿಸುವುದೇ ಆಗುತ್ತದೆ. ಹೊರಗೆ ಎಲ್ಲಾದರು ಸುತ್ತಾಡಲು ಹೋದರಂತೂ, ಅಲ್ಲಲ್ಲಿ ಮಂಟಪೋತ್ಸವಗಳು! (ಅಂದರೆ ನೋಡಿದ ಪ್ರತಿಯೊಬ್ಬರನ್ನು ನಿಂತು ಮಾತನಾಡಿಸಿ ಮುಂದೆ ಹೋಗುವುದು.) {ಅಂದರೆ ದೇವರ ಮೆರವಣಿಗೆಯಲ್ಲಿ, ದೇವರನ್ನು ಅಲ್ಲಲ್ಲಿ ನಿಲ್ಲಿಸಿ ಪೂಜೆ ಮಾಡಿಸುವವರಿದ್ದರೆ ಮಾಡಿಸಿ, ಮೆರವಣಿಗೆಯನ್ನು ಮುಂದಕ್ಕೆ ಕಳಿಸುತ್ತಾರೆ. ಇದಕ್ಕೆ ಮಂಟಪೋತ್ಸವ ಎಂದು ಕರೆಯುತ್ತಾರೆ!!}

ಕೆಲವೊಮ್ಮೆ ತುಂಬಾ ಬೇಕಾದವರ ಮನೆಗಳಿಗೆ ಹೋಗಲೇ ಬೇಕಾಗುತ್ತದೆ. ಅವರುಗಳ ಉಪಚಾರ, ಅಪರೂಪಕ್ಕೆ ಬರುವಿರೆಂದು ತಿನ್ನಲು ಕೊಡುವುದು, ಆಗ ನೋಡಬೇಕು ನಮ್ಮ ಫಜೀತಿ ಅವರು ಪ್ರೀತಿಯಿಂದ ಕೊಡುವುದು ಬೇಡ ಎನ್ನಲು ಆಗುವುದಿಲ್ಲ (ಬೇಡ ಎಂದರು ಬಲವಂತ ಮಾಡುತ್ತಾರೆ) ತಿನ್ನಲು ಹೊಟ್ಟೆಯಲ್ಲಿ ಜಾಗ ಖಾಲಿ ಇರುವುದಿಲ್ಲ! ಹೀಗೆ ಇನ್ನು ಹಲವು ಅಕ್ಕರೆಯ ಸಂಕಷ್ಟಗಳು!!

------------------------------------------------------------------------------------------------


ನಮ್ಮ ಮನೆಗೆ ಕಳೆದ ವಾರ ಬಂದಿದ್ದ ನೆಂಟರ ಪೈಕಿ ನನ್ನ ಅಕ್ಕನ (ದೊಡ್ಡಮ್ಮನ ಮಗಳು), ಎಂಟು ವರ್ಷದ ಮಗ ಗುಡ್ ನೈಟ್ ಹೇಳಿದ ಪರಿಗೆ ನಾವೆಲ್ಲಾ ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕಿದ್ದ ಪ್ರಸಂಗವನ್ನು ಬರೆದಿದ್ದೇನೆ ಓದಿ!
ನಡೆದ್ದಿಷ್ಟೇ, ಅದೊಂದು ರಾತ್ರಿ ನಾವೆಲ್ಲಾ ಇನ್ನು ಮಾತಾಡುತ್ತಿದ್ದೆವು. ಅವನಿಗೆ ಕಣ್ಣು ಬಿಡಿಸಲಾರದಷ್ಟು ನಿದ್ದೆ ಬಂದಿದ್ದರೂ, ಮಲಗದೇ ನಾವು ಏನು ಮಾತಾಡುತ್ತಿವೋ ಎನ್ನುವ ಕುತೂಹಲದಿಂದ ಕಣ್ಣುಗಳು ಮುಚ್ಚಿಕೊಂಡು ಹೋಗುತ್ತಿದ್ದರೂ ಮತ್ತೆ ಮತ್ತೆ ಎಚ್ಚರ ಮಾಡಿಕೊಳ್ಳುತ್ತಿದ್ದ. ಇದಕ್ಕೂ ಸ್ವಲ್ಪ ಹೊತ್ತಿನ ಮುಂಚೆ ಅವನು ತುಂಬಾ ಚೇಷ್ಟೆ ಮಾಡುತ್ತಿದ್ದಾಗ, ಮಲಗು ಎಂದು ಎಷ್ಟು ಹೇಳಿದರೂ ಕೇಳದೆ ಆಟ ಆಡುತ್ತಿದ್ದ ಅವನ್ನು ಕುರಿತು ಅವನ ತಾಯಿ, ಹೀಗೆಲ್ಲ ತುಂಟಾಟ ಆಡಿ ಗೋಳು ಹುಯ್ದುಕೊಳ್ಳುವುದರ ಬದಲು ನೀವೆಲ್ಲ ಓದುವ ಹುಡುಗರು ಜೀವನದಲ್ಲಿ ಏನು ಸಾಧಿಸಬೇಕೆನ್ನುವ ಧ್ಯೇಯ ಹೊಂದಿ ಗುರಿ ಸಾಧಿಸಬೇಕು ಎಂದು ಹೇಳುತ್ತಿರಲು ನಾನು ಆಗ ಅವನನ್ನು ನಿನಗೆ ಏನಾಗಬೇಕು ಎನ್ನುವ ಆಸೆ ಇದೆ ಎಂದು ಕೇಳಿದ್ದಕ್ಕೆ ಅವನು ಉತ್ತರಿಸುವ ಮುಂಚೆ ನನ್ನ ತಾಯಿ ಅವನು ಪೋಲಿಸ್ ಆದ್ರೆ ಚೆನ್ನಾಗಿರುತ್ತೆ, ನನ್ನ ಮೊಮ್ಮಗನ್ನ ಐ ಪಿ ಎಸ್ ಓದಿಸಮ್ಮ ಎಂದು ಹೇಳಿದರು.


ಅದಕ್ಕೆ ಅವನ ತಾಯಿ, ಅಯ್ಯೋ ಈ ಹುಡುಗರು ಪೋಲಿಸ್ ಆಗುವುದಿರಲಿ, ಪೋಲಿಗಳಾಗದೆ ಚೆನ್ನಾಗಿ ಓದಿ ಒಳ್ಳೆಯವರಾದರೆ ಅಷ್ಟೇ ಸಾಕು ಎಂದು ಹೇಳಿದರು!! ಆಗ ಅದಕ್ಕೆ ಉತ್ತರವಾಗಿ ಅವನು ಸರಿ ಅಜ್ಜಿ ನಾನು ಪೋಲಿಸ್ ಆಗುತ್ತೀನಿ ಆಗ ದೊಡ್ಡ ಸ್ವಿಮ್ಮಿಂಗ್ ಪೂಲ್ ಇರುವ, ದೊಡ್ಡ ಮನೆ ಕಟ್ಟಿಸಿ ನಿನ್ನನ್ನು ಕರೀತೀನಿ ಎಂದು ಹೇಳಿದ್ದ! ಈ ಮಾತಿಗೆ ಅವನ (ನನ್ನ ದೊಡ್ಡಮ್ಮ)ಅಜ್ಜಿ ಹುಸಿ ಮುನಿಸು ತೋರಿಸಿ, ಯಾಕೋ ನಿನ್ನ ಚಿಕ್ಕ ಅಜ್ಜಿ ಮಾತ್ರಾನ? ನಮ್ಮನ್ನೆಲ್ಲ ಯಾರನ್ನೂ ಕರೆಯೋದಿಲ್ವೋ ಎಂದು ಕೇಳಿದರು.

ಅದಕ್ಕವನು ಸರಿ ಎಲ್ಲರನ್ನು ಕರೆಯುತ್ತೇನೆ ಸರಿನಾ....ಅ..ಆ..ಆ..ಆಹ್ ಎಂದು ಆಕಳಿಸಿದನು! ಸರಿ ನೀನಿನ್ನೂ ಮಲುಕ್ಕೊಪ್ಪ ಅಂತ ನಾವೆಲ್ಲಾ ಹೇಳಿದ್ದಕ್ಕೆ ಅವನು ಹೂ...ಹ್ಞೂ, ನ್ಹೋ.... ನೀವೆಲ್ಲ ಮಲಗೊವಾಗಲೇ ನಾನು ಮಲಗೋದು ಎಂದು ಹೇಳಿ ಸ್ವಲ್ಪ ಹೊತ್ತು ಎಚ್ಚರವಾಗಿರಲು ಶತಪ್ರಯತ್ನ ಮಾಡಿದ! ಆಗ ನಾವು ಎಚ್ಚರವಾಗಿರುವವರು, ಎಲ್ಲರ ಕಡೆಯೂ ಒಮ್ಮೆ ಕಣ್ಣು ಹಾಯಿಸಿ, ಯಾರು ಮಲಗಿದ್ದಾರೆ, ಮತ್ತು ಯಾರೆಲ್ಲ ಎಚ್ಚರವಾಗಿದ್ದಾರೆ ಎಂದು ಗಮನಿಸಿದೆವು. ನನ್ನ ದೊಡ್ಡಮ್ಮನಿಗೂ ಕೂಡ ನಿದ್ದೆ ಬರುವುದರಲ್ಲಿತ್ತು! ಆಗ ನಾನು, ನೋಡೋ ನಿನ್ನ ಅಜ್ಜಿಗೂ ನಿದ್ದೆ ಬಂದುಬಿಡ್ತು, ನೀನೂ ಬೇಗ ಮಲಗಿಕೋ ನಾವೂ ಸಹ ಇನ್ನೇನು ಮಲಗುತ್ತೇವೆ ಅಂತ ಹೇಳಿದ ಮೇಲೆ, ಆಯಿತು ಅಂತ ಮಲಗಲು ನಿರ್ಧರಿಸಿ, ಎಲ್ಲರಿಗೂ ಗುಡ್ ನೈಟ್ ಅಂತ ಹೇಳಿದ. ಅವನಿಗೆ ಸ್ವಲ್ಪ ಮೂಗು ಕಟ್ಟಿದ್ದರಿಂದ ಅವನು ಗುಡ್ ನೈಟ್ ಎಂದು ಹೇಳಿದ್ದು ಗುಂಡೇಟು ಅಂತ ನಮಗೆಲ್ಲ ಕೇಳಿಸಿದ್ದು!! ಆಗ ಅರ್ಧಂಬರ್ಧ ಎಚ್ಚರವಾಗಿದ್ದ ದೊಡ್ಡಮ್ಮ ಅವನು ಹೇಳಿದ್ದು ಸರಿಯಾಗಿ ಅರ್ಥಮಾಡಿಕೊಳ್ಳದೆ ನಿದ್ದೆಗಣ್ಣಲ್ಲೇ ಯಾರಿಗೋ ಗುಂಡೇಟು, ಈಗಲೇ ಪೋಲಿಸ್ ಆಗಿಬಿಟ್ಯಾ? ಎಂದು ಕೇಳಿದರು. ಮಿಕ್ಕವರಲ್ಲಿ ಅರ್ಥ ಮಾಡಿಕೊಂಡ ನಾವೆಲ್ಲಾ ಬಿದ್ದು ಬಿದ್ದು ನಕ್ಕಿದ್ದೆವು!!!